Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Feb 21, 2024, 11:42 PM IST
ಹೊಟೇಲ್ ಕೊಠಡಿಯಲ್ಲಿ ಯುವಕನ ಮೃತದೇಹ ಪತ್ತೆ
ಕಾಸರಗೋಡು: ಮಡಿಕೈ ಮೋಕೌಟ್ ನಿವಾಸಿ, ಸೂರ್ಯವಂಶಿ ಹೊಟೇಲ್ನ ರಿಸೆಪ್ಶನಿಸ್ಟ್ ಅರೀಕರ ಅನೂಪ್(33) ಅವರ ಮೃತದೇಹ ಹೊಟೇಲ್ ಕೊಠಡಿಯಲ್ಲಿ ಪತ್ತೆಯಾಗಿದೆ.
ತಲೆಯಲ್ಲಿ ಆಳವಾದ ಗಾಯ ಕಂಡು ಬಂದಿದ್ದು, ರಕ್ತ ವಾಂತಿ ಮಾಡಿದ್ದರು. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಬಾವಿಗಿಳಿದು ಸಿಲುಕಿದ ಯುವಕ: ರಕ್ಷಣೆ
ಕಾಸರಗೋಡು: ಬಾವಿಗೆ ಬಿದ್ದ ಆಡನ್ನು ರಕ್ಷಿಸಲು ಬಾವಿಗಿಳಿದ ಚೆಂಗಳ ಅರ್ತಿಪಳ್ಳದ ಸಾದಿಕ್ (21) ಮೇಲಕ್ಕೇರಲಾಗದೆ ಅಲ್ಲೇ ಸಿಲುಕಿಕೊಂಡಿದ್ದು, ಬಳಿಕ ಅಗ್ನಿಶಾಮಕ ದಳ ಆಗಮಿಸಿ ಆತನನ್ನು ರಕ್ಷಿಸಿದೆ. ಬಾವಿಯಲ್ಲಿ ಸಿಲುಕಿಕೊಂಡಿದ್ದು ಅಗ್ನಿಶಾಮಕ ದಳ ರಕ್ಷಿಸಿತು.
ರೋಯಲ್ ಟ್ರಾವಂಕೂರ್ ಕಂಪೆನಿ ವಿರುದ್ಧ ಬದಿಯಡ್ಕದಲ್ಲಿ ಕೇಸು ದಾಖಲು
ಬದಿಯಡ್ಕ: ಹೆಚ್ಚಿನ ಬಡ್ಡಿಯ ಭರವಸೆ ನೀಡಿ 2.80 ಲಕ್ಷ ರೂ. ಠೇವಣಿ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಕೊಲ್ಲಂಗಾನದ ಶ್ರೀಶರಾಜ ಶೆಟ್ಟಿ ನೀಡಿದ ದೂರಿನಂತೆ ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ನೂಸರ್ ಕಂಪೆನಿ ಮ್ಯಾನೇಜಿಂಗ್ ಡೈರೆಕ್ಟರ್ ರಾಹುಲ್, ಡೈರೆಕ್ಟರ್ಗಳಾದ ಅನಿಲ್, ಸಿಂಧು, ಸಂಗೀತ, ಸಿಮಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. 2023 ಮಾರ್ಚ್ 18ರಂದು 2.80 ಲಕ್ಷ ರೂ. ಠೇವಣಿ ಇರಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಕಂಪೆನಿ ವಿರುದ್ಧ ಈ ಹಿಂದೆಯೂ ಕೇಸು ದಾಖಲಿಸಿತ್ತು.
ಗ್ರಾಮ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ
ಕಾಸರಗೋಡು: ಜನರು ನೀಡುವ ಅರ್ಜಿಗಳನ್ನು ಪರಿಶೀಲಿಸದೆ ಅದನ್ನು ಮೂಲೆಗುಂಗು ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ಗ್ರಾಮ ಕಚೇರಿಗಳಿಗೆ ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿ ವಿ.ಉಣ್ಣಿಕೃಷ್ಣನ್ ನೇತೃತ್ವದ ವಿಜಿಲೆನ್ಸ್ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಉಪ್ಪಳ, ಮುಳಿಯಾರು ಮತ್ತು ನೆಲ್ಲಿಕಟ್ಟೆಯಲ್ಲಿರುವ ಪಾಡಿ-ನೆಕ್ರಾಜೆ ಗ್ರಾಮ ಕಚೇರಿಗಳಿಗೆ ದಾಳಿ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ