Kasaragod;ಶಾಲಾ ಅಧ್ಯಾಪಕರಿಬ್ಬರ ಬೈಕ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಸೆರೆ
Team Udayavani, Aug 29, 2023, 10:56 PM IST
ಕಾಸರಗೋಡು: ಶಾಲಾ ಅಧ್ಯಾಪಕರಿಬ್ಬರ ಮೋಟಾರ್ ಬೈಕ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮಲಪುರಂ ವಳಾಂಚೇರಿ ಠಾಣೆಯ ವ್ಯಾಪ್ತಿಯ ವಿ.ಪಿ. ಸೈದಲವಿ (58)ಯನ್ನು ಪೊಲೀಸರು ಬಂಧಿಸಿದ್ದಾರೆ.
ಪಿ.ವಿ. ಸೈದಲವಿಗೆ ಸುಮಾರು 50 ಲಕ್ಷ ರೂ. ನಷ್ಟು ನಷ್ಟ ಸಂಭವಿಸಿದ್ದಾಗಿಯೂ, ಅದರ ದುಃಖದಲ್ಲಿ ಬೈಕ್ಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ವೇಳೆ ಅಧ್ಯಾಪಕರೊಂದಿಗೆ ವಿ.ಪಿ.ಸೈದಲವಿಗೆ ಯಾವುದೇ ಸಂಬಂಧವಿಲ್ಲವೆಂದೂ, ಆತ ಮೂರು ದಿನಗಳ ಹಿಂದೆಯಷ್ಟೇ ಕಾಸರಗೋಡಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಳಂಗರೆ ಪಳ್ಳಿಕಾಲ್ನ ಮಸೀದಿ ಪರಿಸರದಲ್ಲಿ ಇರಿಸಿದ್ದ ಎರಡು ಬೈಕ್ಗಳಿಗೆ ಸೋಮವಾರ ಮುಂಜಾನೆ ಬೆಂಕಿ ಹಚ್ಚಲಾಗಿತ್ತು. ಮಸೀದಿಯ ಬಾಡಿಗೆ ಕಟ್ಟಡದಲ್ಲಿ ವಾಸಿಸುತ್ತಿರುವ ಮಲಪ್ಪುರಂ ಪುಳಿಕಲ್ ಕೋಡಿಕುತ್ತಿಪರಂಬ್ ನಿವಾಸಿ ನಜ್ಮುದ್ದೀನ್ ಹಾಗೂ ಮಲಪ್ಪುರಂ ವಲಿಯೋರ ಆಶಾರಿಪ್ಪಡಿಯ ಮುಹಮ್ಮದ್ ಸಾಜಿತ್ ಅವರ ಬೈಕ್ಗಳಿಗೆ ಬೆಂಕಿ ಹಚ್ಚಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!