ಮಂಜೇಶ್ವರ ಮಂಡಲದಲ್ಲಿ ಎಡರಂಗ ಅಭ್ಯರ್ಥಿ ದ್ವಿತೀಯ ಹಂತದ ಪರ್ಯಟನೆ
Team Udayavani, Apr 4, 2019, 6:30 AM IST
ಕುಂಬಳೆ: ಕಾಸರಗೋಡು ಲೋಕಸಭಾ ಎಡರಂಗ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್ ಅವರು ಮಂಜೇಶ್ವರ ಮಂಡಲದ ದ್ವಿತೀಯ ಹಂತದ ಪರ್ಯಟನೆಯಲ್ಲಿ ವಿವಿಧೆಡೆಗಳಲ್ಲಿ ಸಂಚರಿಸಿ ಮತದಾರರಿಂದ ಮತ ಯಾಚಿಸಿ ಕ್ಷೇತ್ರಾದ್ಯಂತ ಸಂಚಲನ ಮೂಡಿಸಿದರು.
ಉದ್ಯಾವರಮಾಡ ಅರಸು ದೈವಸ್ಥಾನ, ಮೀಂಜ ಮೀಯಪದವು, ಬಳ್ಳಂಗೂಡೇಲು, ಕುಳೂರು ಚಿನಾಲ, ಎಣ್ಮಕಜೆ ಪಳ್ಳ, ಬಾಡೂರು ಪೆರ್ಮುದೆ ಮೊದಲಾದೆಡೆಗಳಲ್ಲಿ ಕಾರ್ಯಕರ್ತರು ಮೈಸೂರು ಪೇಟ, ಹಾಳೆಯ ಮುಟ್ಟಪ್ಪಾಳೆ ತೊಡಿಸಿ ಹಾರಾರ್ಪಣೆಗೈದು, ಶಾಲು ಹೊದೆಸಿ, ಹಾರಾರ್ಪಣೆಗೈದು ಭವ್ಯ ಸ್ವಾಗತ ನೀಡಿದರು.
ಅಭ್ಯರ್ಥಿಯೊಂದಿಗೆ ಮಾಜಿ ಶಾಸಕ ಸಿ.ಎಚ್. ಕುಞಂಬು, ಎಡರಂಗ ಮಂಜೇಶ್ವರ ಮಂಡಲ ಸಮಿತಿ ಸಂಚಾಲಕ ಡಾ| ವಿ.ಪಿ.ಪಿ. ಮುಸ್ತಫಾ, ಎಡರಂಗ ನಾಯಕರಾದ ಕೆ.ಆರ್. ಜಯಾನಂದ, ಬಿ.ವಿ. ರಾಜನ್, ಪಿ. ರಘುದೇವನ್, ಎಂ. ಶಂಕರ ರೈ, ಅಬ್ದುಲ್ ರಜಾಕ್ ಚಿಪ್ಪಾರ್, ಸಿ.ಎ. ಸುಬೈರ್, ರಾಮಕೃಷ್ಣ ಕಂಡಂಬಾರ್, ಬೇಬಿ ಶೆಟ್ಟಿ, ಸಜಿತ್ ರೈ, ಅಜಿತ್ ಎಂ.ಸಿ., ಜಯರಾಂ ಬಲ್ಲಂಗೂಡೇಲು, ಮುನೀರ್ ಕುಂಡಳಂ, ಹೈದರ್ ಕುಳಂಗರ, ತಾಜುದ್ದೀನ್ ಮೊಗ್ರಾಲ್, ಅಹಮ್ಮದಾಲಿ ಕುಂಬಳೆ, ಜೋನ್ ಐಮನ್, ವಿ.ಕೆ. ರಮೇಶ್, ರಾಘವನ್, ಹಮೀದ್ ಅಭ್ಯರ್ಥಿಯ ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ
Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್ ಮಾಡಿದ್ರಾ ಸಮಂತಾ?: ಟ್ರೆಂಡ್ ಆದ ಸ್ಯಾಮ್
Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!