Crime: ಯುವಕನ ಕೊಲೆ: ತಲೆಮರೆಸಿಕೊಂಡ ಆರೋಪಿಗಾಗಿ ರೆಡ್ ಕಾರ್ನರ್ ನೋಟಿಸ್
Team Udayavani, Mar 14, 2024, 7:22 PM IST
ಕುಂಬಳೆ: ಮೀಯಪದವು ಮದಕ್ಕಳದ ದಿ| ಅಬ್ದುಲ್ಲ ಅವರ ಪುತ್ರ ಮೊದೀನ್ ಆರೀಫ್ (22) ಕೊಲೆ ಪ್ರಕರಣದ ತನಿಖೆಗೆ ಪ್ರತ್ಯೇಕ ತಂಡವನ್ನು ನೇಮಿಸಿದೆ. ಪ್ರಕರಣದ ಆರೋಪಿಗಳಾದ ಇಬ್ಬರು ಕೊಲ್ಲಿಗೆ ಪರಾರಿಯಾಗಿದ್ದು, ಇವರನ್ನು ಬಂಧಿಸಲು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಪ್ರತ್ಯೇಕ ತಂಡ ತೀರ್ಮಾನಿಸಿದೆ.
ನೋಟಿಸ್ ಜಾರಿ ಮಾಡಿದ ಬಳಿಕ ಇಂಟರ್ಪೋಲ್ ನೆರವಿನೊಂದಿಗೆ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು. ಇತರ ಇಬ್ಬರು ಬೆಂಗಳೂರು ಮತ್ತು ಇನ್ನಿಬ್ಬರು ಗೋವಾದಲ್ಲಿ ಇರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ.