ಕೇರಳದಲ್ಲಿ ಉಗ್ರ ಚಟುವಟಿಕೆ: ಆರೋಪಿಗೆ ಪಾಕಿಸ್ಥಾನ ರಕ್ಷಣೆ
Team Udayavani, May 9, 2019, 6:10 AM IST
ಕಾಸರಗೋಡು: ಕೇರಳದಲ್ಲಿ ಉಗ್ರಗಾಮಿ ಚಟುವಟಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಕಣ್ಣೂರು ಮರಕ್ಕಾರ್ಕಂಡಿ ನಿವಾಸಿ ಕೊಚ್ಚುಪಿಡಿಯಾಕಲ್ ಮೊಹಮ್ಮದ್ ಸಾಬೀರ್ ಯಾನೆ ಅಯೂಬ್ ಪಾಕಿಸ್ಥಾನದಲ್ಲಿದ್ದು, ಆತನಿಗೆ ಪಾಸ್ಪೋರ್ಟ್ ನೀಡಿ ಸಂರಕ್ಷಿಸುತ್ತಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತಿಳಿಸಿದೆ.
ಮೊಹಮ್ಮದ್ ಸಾಬೀರ್ ವರ್ಷಗಳ ಹಿಂದೆಯೇ ಕೇರಳದಿಂದ ದುಬಾೖಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಅತನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಎನ್ಐಎ ತನಿಖೆ ನಡೆಸಿದಾಗ ಆತ ಪಾಕಿಸ್ಥಾನದ ರಾವಲ್ಪಿಂಡಿಯಲ್ಲಿರುವುದಾಗಿಯೂ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಇಂಟರ್ಪೋಲ್ ಮುಖಾಂತರ ಬಂಧಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎನ್ಐಎ ತಿಳಿಸಿದೆ.