ಜಿಲ್ಲೆಗೆ ಆಗಮಿಸಿದ್ದ ಏಕೈಕ ರಾಷ್ಟ್ರಪತಿ
Team Udayavani, Jul 25, 2017, 7:40 AM IST
ತಿರುವನಂತಪುರ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಧಿಕಾರಾವಧಿ ಸೋಮವಾರ ಮಧ್ಯರಾತ್ರಿಗೆ ಮುಗಿಯ ಬಹುದು. ಆದರೆ ಕಾಸರಗೋಡಿನ ಜನರಿಗೆ ಅವರ ನೆನಪು ಬಹುಕಾಲ ಉಳಿಯಲಿದೆ.
ಇದಕ್ಕೆ ಕಾರಣ ಕಾಸರಗೋಡಿಗೆ ಭೇಟಿ ನೀಡಿದ ಏಕೈಕ ರಾಷ್ಟ್ರಪತಿ ಅವರು. ಸ್ವತಂತ್ರ ಭಾರತದ ಇಷ್ಟೆಲ್ಲ ರಾಷ್ಟ್ರಪತಿಗಳು ಕೇರಳಕ್ಕೆ ಬರುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಆದರೆ ರಾಜ್ಯದ ಉತ್ತರದ ತುದಿಯಲ್ಲಿರುವ ಕಾಸರಗೋಡು ಜಿಲ್ಲೆಗೆ ಮಾತ್ರ ಯಾವ ರಾಷ್ಟ್ರಪತಿಯೂ ಬಂದಿರಲಿಲ್ಲ. ಆದರೆ ಪ್ರಣವ್ ಮುಖರ್ಜಿ ಈ ಪರಂಪರೆಯನ್ನು ಮುರಿದು ಜಿಲ್ಲೆಗೆ ಬಂದ ಮೊದಲ ರಾಷ್ಟ್ರಪತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ 2014, ಜು. 18ರಂದು ಪ್ರಣವ್ ಮುಖರ್ಜಿ ಕಾಸರಗೋಡಿನ ಪೆರಿಯಕ್ಕಾಗಮಿಸಿದ್ದರು. ಪೆರಿಯ ಕ್ಯಾಂಪಸ್ಗೆ ತೇಜಸ್ವಿನಿ ಹಿಲ್ಸ್ ಎಂದು ಹೆಸರಿಟ್ಟಿರುವುದೂ ಅವರೇ.
ಮಳೆಯ ಕಾರಣ ಹೆಲಿಕಾಪ್ಟರ್ ಇಳಿಯಲು ಅಸಾಧ್ಯವಾಗಿ ಮುಖರ್ಜಿ ಮಂಗಳೂರಿನಿಂದ ರಸ್ತೆ ಮೂಲಕ ಕಾಸರಗೋಡಿಗೆ ಆಗಮಿಸಿದ್ದರು. ಹೊಂಡಗುಂಡಿ ಗಳಿಂದ ತುಂಬಿದ ಹೆದ್ದಾರಿಯಲ್ಲಿ ರಾಷ್ಟ್ರಪತಿಯಿದ್ದ ಗುಂಡು ನಿರೋಧಕ ಕಾರು ಭರ್ತಿ 170 ಕಿ. ಮೀ. ಪ್ರಯಾಣಿಸಿರುವುದು ಕೂಡ ಒಂದು ದಾಖಲೆ.
ಪ್ರಾಯಶಃ ರಾಷ್ಟ್ರಪತಿಯಾದ ಬಳಿಕ ಮುಖರ್ಜಿ ರಸ್ತೆ ಮೂಲಕ ಇಷ್ಟು ದೀರ್ಘ ಪ್ರಯಾಣ ಮಾಡಿರುವುದು ಕೂಡ ಇದೇ ಮೊದಲಾಗಿರಬಹುದು. ಅವರ ಬೆಂಗಾವಲಿಗೆ 30 ವಾಹನಗಳಿದ್ದವು.
ದೇಶದ ಪ್ರಥಮ ಪ್ರಜೆಯ ದರ್ಶನಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಕಾಸರಗೋಡು ಪಾಲಿಗೆ ಅದು ಐತಿಹಾಸಿಕವಾದ ದಿನವಾಗಿತ್ತು.
ಕಾಸರಗೋಡು ಸಿಪಿಸಿಆರ್ಐಗೆ ಬರಲೊಪ್ಪಿದ್ದ ಫಕ್ರುದ್ದೀನ್ 1977ರಲ್ಲಿ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಕಾಸರಗೋಡಿನ ಸಿಪಿಸಿಆರ್ಐ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದರು. ರಾಷ್ಟ್ರಪತಿ ಸ್ವಾಗತಕ್ಕೆ ಕಾಸರಗೋಡಿನಲ್ಲಿ ಸರ್ವ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೆ 1977, ಫೆ. 11ರಂದು ಫಕ್ರುದ್ದೀನ್ ಹೃದಯಾಘಾತದಿಂದ ನಿಧನರಾದರು. ಹೀಗಾಗಿ ಕಾಸರಗೋಡಿಗೆ ರಾಷ್ಟ್ರಪತಿಯೊಬ್ಬರು ಭೇಟಿ ನೀಡುವ ಸೌಭಾಗ್ಯಕ್ಕಾಗಿ 2014ರ ತನಕ ಕಾಯಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್