“ರಂಗಪ್ರಸಂಗ-5′ ಆಮಂತ್ರಣ ಪತ್ರಿಕೆ ಬಿಡುಗಡೆ
Team Udayavani, Jul 7, 2017, 3:45 AM IST
ಕಾಸರಗೋಡು: ಸಿರಿ ಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೊಡು ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ರಂಗ ಪ್ರಸಂಗ ಸರಣಿ ಕಾರ್ಯಕ್ರಮದ ಐದನೇ ಕಾರ್ಯಕ್ರಮ “ರಂಗಪ್ರಸಂಗ-5′ ಅಧ್ಯಯನ ಯೋಗ್ಯ ಯಕ್ಷಗಾನ ಪ್ರದರ್ಶನವು ಬೆಂಗಳೂರಿನಲ್ಲಿ ಶ್ರೀ ರಾಮ ಕಲಾಸಂಘ ಕೋಣನ ಕುಂಟೆ ಹಾಗೂ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾಸಂಘ ನೇರಳಕಟ್ಟೆ’ ಸಂಸ್ಥೆಗಳ ಸಹಕಾರಗೊಂದಿಗೆ ಜುಲೈ 16 ಆದಿತ್ಯವಾರ ಅಪರಾಹ್ನ 2ರಿಂದ ಜೆ.ಪಿ.ನಗರ. ಕೋಣನಕುಂಟೆ ಶ್ರೀ ಲಕ್ಷಿ$¾à ನರಸಿಂಹ ಧಾರ್ಮಿಕ ಸಭಾಂಗಣದಲ್ಲಿ ಜರಗಲಿದೆ.
ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು ಕಾಸರಗೋಡು ಸರಕಾರೀ ಕಾಲೇಜಿನ ಯಕ್ಷಗಾನ ಅಧ್ಯಯನ ಪೀಠದ ನಿರ್ದೇಶಕರಾದ ಡಾ| ರತ್ನಾಕರ ಮಲ್ಲಮೂಲೆ ಕಾಸರಗೋಡಿನಲ್ಲಿ ಬಿಡುಗಡೆ ಗೊಳಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟದ ನಿರ್ದೇಶಕ ರಮೇಶ ಕೆ.ವಿ., ಹಿರಿಯ ಸಾಹಿತಿ, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ಪ್ರಶಾಂತ ಹೊಳ್ಳ ನೀರಾಳ ಉಪಸ್ಥಿತರಿದ್ದರು.