Trikkaripur ಕೊಲೆ ಪ್ರಕರಣ- ಒಂದನೇ ಆರೋಪಿಗೆ ಜೀವಾವಧಿ ಸಜೆ
Team Udayavani, Oct 1, 2023, 2:12 AM IST
ಕಾಸರಗೋಡು: ಚೆರ್ವತ್ತೂರಿನ ಹೋಂ ನರ್ಸಿಂಗ್ ಸಂಸ್ಥೆಯನ್ನು ನಡೆಸುತ್ತಿದ್ದ ತೃಕ್ಕರಿಪುರ ಒಳವರದ ರಜನಿ (35) ಕೊಲೆ ಪ್ರಕರಣದಲ್ಲಿ ಒಂದನೇ ಆರೋಪಿ ನೀಲೇಶ್ವರ ಠಾಣೆ ವ್ಯಾಪ್ತಿಯ ಸತೀಶನ್ (41)ಗೆ ಜೀವಾವಧಿ ಸಜೆ, 1 ಲಕ್ಷ ರೂ. ದಂಡ ಹಾಗೂ ಸಾಕ್ಷಿ ನಾಶಗೊಳಿಸಿದ್ದಕ್ಕೆ ಐದು ವರ್ಷ ಕಠಿನ ಸಜೆ, 1 ಲಕ್ಷ ರೂ. ದಂಡ, ದಂಡ ಪಾವತಿಸದಿದ್ದಲ್ಲಿ ಮೂರು ವರ್ಷ ಕಠಿನ ಸಜೆ ಅನುಭವಿಸಬೇಕು ಎಂದು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ) ತೀರ್ಪು ನೀಡಿದೆ.
ಈ ಪ್ರಕರಣದ ಎರಡನೇ ಆರೋಪಿ ಚೆರ್ವತ್ತೂರು ಮದರ್ ಥೆರೆಸಾ ಚಾರಿಟೇಬಲ್ ಟ್ರಸ್ಟ್ನ ಮಾಲಕ, ಮಾಹೆ ಠಾಣೆ ವ್ಯಾಪ್ತಿಯ ನಿವಾಸಿ ಬೆನಡಿಕ್ಟ್ ಯಾನೆ ಬೆನ್ನಿ(48)ಗೆ ಸಾಕ್ಷಿ ನಾಶಪಡಿಸಲು ಜತೆಯಾದ ಕಾರಣಕ್ಕೆ ಐದು ವರ್ಷ ಕಠಿನ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ. 2014ರ ಸೆ. 12ರಂದು ಘಟನೆ ನಡೆದಿತ್ತು. ಚಂದೇರ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ