ಬೆಂಕಿ ಅವಘಡ: ಸುಟ್ಟು ಭಸ್ಮವಾದ ಎಟಿಎಂ ಮೆಷಿನ್
Team Udayavani, May 14, 2023, 6:55 AM IST
ಮಂಗಳೂರು: ನಗರದ ಹಂಪನಕಟ್ಟೆಯ ಬ್ಯಾಂಕ್ವೊಂದರ ಎಟಿಎಂನಲ್ಲಿ ಬೆಂಕಿ ಅವಘಡ ಸಂಭವಿಸಿ ನೋಟುಗಳು ಸುಟ್ಟು ಹೋಗಿವೆ.
ಶುಕ್ರವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಎಟಿಎಂ ಮೆಷಿನ್ ಸುಟ್ಟು ಹೋಗಿದೆ. ಛೇಂಬರ್ನಲ್ಲಿದ್ದ ನೋಟುಗಳಿಗೂ ಬೆಂಕಿ ತಗಲಿದೆ.
ನಷ್ಟದ ಅಂದಾಜು ಇನ್ನಷ್ಟೆ ತಿಳಿಬೇಕಿದೆ. ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ಬೆಂಕಿ ನಂದಿಸಿದ್ದಾರೆ.
ದಟ್ಟ ಹೊಗೆ ಪಕ್ಕದಲ್ಲಿರುವ ಬ್ಯಾಂಕ್ ಕಚೇರಿಯೊಳಗೆ ಹರಡಿದ ಪರಿಣಾಮ ಅಲ್ಲಿಯೂ ಹಾನಿಯುಂಟಾಗಿದೆ. ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ನೂಟ್ ಕಾರಣವಾಗಿರ ಬಹುದು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.