ವಿಮಾನ ಜಾರಿದ ಪ್ರಕರಣ: ಡಿಜಿಸಿಎ ತನಿಖೆ ಪೂರ್ಣ
Team Udayavani, Jul 3, 2019, 2:23 PM IST
ಮಂಗಳೂರು: ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನ ರನ್ವೇಯಿಂದ ಜಾರಿದ
ಪ್ರಕರಣಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶ ನಾಲಯದ (ಡಿಜಿಸಿಎ) ತಂಡ ತನಿಖೆ ನಡೆಸಿ ತೆರಳಿದೆ. ತನಿಖೆಯ ವರದಿಯನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹಾಗೂ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಸಲ್ಲಿಸಲಿದ್ದು ಇದರ ಆಧಾರದಲ್ಲಿ ಮುಂದಿನ ಕ್ರಮ ಆಗಲಿವೆ. ಇದೇ ವೇಳೆ ಏರ್ಇಂಡಿಯಾ
ಎಕ್ಸ್ಪ್ರೆಸ್ ವತಿಯಿಂದಲೂ ಅಂತರಿಕ ತನಿಖೆ ನಡೆಯು ತ್ತಿದ್ದು ಇದರ ವರದಿ ವಿಮಾನ ಹಾರಾಟ ಸುರಕ್ಷಾ ಮುಖ್ಯಸ್ಥರಿಗೆ ಸಲ್ಲಿಕೆಯಾಗಲಿದೆ.
ರನ್ವೇಯಿಂದ ಜಾರಿರುವ ವಿಮಾನವನ್ನು ವಿಮಾನ ನಿಲ್ದಾಣದ ಹೊಸ ವಿಭಾಗಕ್ಕೆ ತಂದು ಇರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಸಮಗ್ರ ತಪಾಸಣೆಯ ನಡೆಸಿ ಎಂಜಿನಿಯರ್ಗಳು ವರದಿಯಲ್ಲಿ ಈ ವಿಮಾನ ಹಾರಾಟಕ್ಕೆ ಸಮರ್ಪಕವಾಗಿದೆ ಎಂದು ದೃಢೀಕರಣಗೊಳಿಸಿದ ಬಳಿಕ ಹಾರಾಟದ ಬಗ್ಗೆ ನಿರ್ಧಾರವಾಗಲಿದೆ. ಈ ಪ್ರಕ್ರಿಯೆಗೆ ಕನಿಷ್ಠ 7ರಿಂದ 8 ದಿನಗಳು ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ