ಮೀನಕಳಿಯ: ಬಸ್‌ ಸೌಲಭ್ಯವಿಲ್ಲದೆ ಸಂಚಾರ ಸಂಕಷ್ಟ


Team Udayavani, Dec 7, 2021, 5:26 PM IST

ಮೀನಕಳಿಯ: ಬಸ್‌ ಸೌಲಭ್ಯವಿಲ್ಲದೆ ಸಂಚಾರ ಸಂಕಷ್ಟ

ಬೈಕಂಪಾಡಿ: ಇಲ್ಲಿನ ಮೀನಕಳಿಯ, ಕೂರಿಕಟ್ಟ ಪ್ರದೇಶವು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿದ್ದು, ಉತ್ತಮ ರಸ್ತೆಗಳಿದ್ದರೂ ನಿತ್ಯ ಕೆಲಸ ಕ್ಕಾಗಿ, ಶಾಲೆಗಾಗಿ ಕಿಲೋ ಮೀಟರ್‌ ಗಟ್ಟಲೆ ನಡೆ ಯುವುದು ಮಾತ್ರ ತಪ್ಪದು. ಈ ಹಿಂದೆ 2 ಬಸ್‌ಗಳ ಓಡಾಟವಿದ್ದರೆ ಈಗ ಒಂದೇ ಬಸ್‌ ಓಡಾಡುತ್ತಿದೆ.

ಈ ಹಿಂದೆ ಬೆಳಗ್ಗೆ 7 ಗಂಟೆಗೆ ಬರುತ್ತಿದ್ದ ಬಸ್‌ ಅನುಕೂಲಕರವಾಗಿತ್ತು. ಆದರೆ ಈಗ ಈ ಬಸ್‌ ಬರುತ್ತಿಲ್ಲ. ಇನ್ನೊಂದು ಬಸ್‌ ಬರುವುದು 9.30ಕ್ಕೆ. ಈ ಬಸ್‌ ಬೆಳಗ್ಗೆ ಬೇಗನೆ ಕೆಲಸಕ್ಕೆ ಹೋಗುವವರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯೋಜನಕ್ಕೆ ಬಾರದು.

ಒಂದೊಮ್ಮೆ ಇದು ಕೆಟ್ಟು ಬರದೇ ಹೋದರೆ ಕೊನೆಯ ಕ್ಷಣದಲ್ಲಿ ಎಲ್ಲವೂ ಅಸ್ತವ್ಯಸ್ತ. ಇದನ್ನು ನಂಬಿರುವವರು ಓಟ ಆರಂಭಿಸಿದರೂ ಸಕಾಲದಲ್ಲಿ ಗಮ್ಯ ತಲುಪುವುದು ಕಷ್ಟ. ಇದರಿಂದ ಕೆಲಸಕ್ಕೆ ಹೋಗುವವರು ಅರ್ಧ ದಿನದ ವೇತನವನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಬೈಕಂಪಾಡಿ ಮೀನಕಳಿಯ, ಕೂರಿಕಟ್ಟ ಪ್ರದೇಶ ದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು ಬಡ ಹಾಗೂ ಮಧ್ಯಮ ಕುಟುಂಬ ವರ್ಗದ ಕುಟುಂಬದವರೇ ಹೆಚ್ಚಾಗಿದ್ದಾರೆ.

ಬೈಕಂಪಾಡಿ ಕೈಗಾರಿಕೆ ಪ್ರದೇಶ ಒಂದು ಕಡೆಯಾದರೆ, ಪಶ್ಚಿಮದಲ್ಲಿ ವಸತಿ ಬಡಾವಣೆಗಳು ತುಂಬಿವೆ. ಪ್ರತಿಯೊಂದೂ ಕೆಲಸಕ್ಕೂ ಬೈಕಂಪಾಡಿ ಪೇಟೆಗೆ ಹೋಗಬೇಕು. ಇದಕ್ಕೆಲ್ಲ ಪ್ರಸ್ತುತ ಒಂದೇ ಬಸ್‌ ಅನ್ನು ನಂಬಿಕೊಂಡಿದ್ದಾರೆ. ಇಲ್ಲವಾದರೆ ದುಬಾರಿ ಬಾಡಿಗೆ ತೆತ್ತು ರಿಕ್ಷಾವೋ, ಇತರ ವಾಹನಗಳನ್ನೋ ಆಶ್ರಯಿಸಬೇಕು.

ಬೇಡಿಕೆ ಈಡೇರಿಲ್ಲ
ಮಂಗಳೂರು ಮಹಾನಗರ ಪಾಲಿಕೆ ಹತ್ತನೇ ಮತ್ತು ಹನ್ನೊಂದನೇ ವಾರ್ಡ್‌ ವ್ಯಾಪ್ತಿಯಲ್ಲಿ ನರ್ಮ್ ಬಸ್‌ಗಾಗಿ ಬೇಡಿಕೆ ಹಿಂದೆಯೇ ಇಡ ಲಾಗಿತ್ತು. ಪಾಲಿಕೆಯ ಆಡಳಿತ ಬದಲಾದರೂ ಸರಕಾರ ಬದಲಾದರೂ ಜನರ ಬೇಡಿಕೆಯ ಬಸ್‌ ಮಾತ್ರ ಈ ಬಡಾವಣೆಗೆ ಬಂದಿಲ್ಲ. ಬೇಗನೆ ಎದ್ದು ಮನೆ ಕೆಲಸಗಳನ್ನು ಮುಗಿಸಿ ಕಾರ್ಮಿಕರು, ಶಾಲಾ ಮಕ್ಕಳು ತೆರಳುತ್ತಾರೆ.

ಒಳರಸ್ತೆಯ ಸಂಚಾರಕ್ಕೆ ರೈಲು ಅಡ್ಡಿ
ಈ ಪ್ರದೇಶದ ಜನರು ಮುಖ್ಯರಸ್ತೆ ತಲುಪಲು ಒಳ ದಾರಿ ಇದೆಯಾದರೂ ರೈಲು ಹಳಿ ದಾಟಿ ಮುನ್ನಡೆಯಬೇಕು. ನವಮಂಗಳೂರು ಬಂದರಿಗೆ ಆಗಮಿಸುವ ಗೂಡ್ಸ್‌ ರೈಲು ಕೆಲವೊಮ್ಮೆ ಹಳಿಯ ಮೇಲೆ ವಾರಗಟ್ಟಲೆ ನಿಂತು ಬಳಿಕ ಹಿಂದಿರುಗುತ್ತದೆ. ಈ ಸಂದರ್ಭಗಳಲ್ಲಿ ರೈಲು ಗಾಲಿಯ ನಡುವೆ ಸರ್ಕಸ್‌ ಮಾಡುತ್ತಾ ಅಪಾಯಕಾರಿಯಾಗಿ ದಾಟ ಬೇಕಾಗುತ್ತದೆ. ಈ ಸಂದರ್ಭ ಹಲವರು ಬಿದ್ದು ಗಾಯಮಾಡಿಕೊಂಡ ಉದಾಹರಣೆಗಳೂ ಇವೆ.

ಅನಿವಾರ್ಯ ಸಂದರ್ಭಕ್ಕೆ ಆಟೋ ರಿಕ್ಷಾಗಳಿ ದ್ದರೂ ದಿನ ನಿತ್ಯಕ್ಕೆ ದುಬಾರಿ ಸಾರಿಗೆಯಾಗುತ್ತದೆ. ಪಣಂಬೂರು ಬೀಚ್‌ ಸಮೀಪದಲ್ಲೇ ಇರುವು ದರಿಂದ ನರ್ಮ್ ಬಸ್‌ ಸಂಚಾರಕ್ಕೆ ಹೆಚ್ಚಿನ ಬೇಡಿಕೆ ಯಿದೆ. ಮಂಗಳೂರು ಸಹಿತ ವಿವಿಧೆಡೆ ಈಗಾಗಲೇ ನರ್ಮ್ ಓಡಾಟವಿದೆ. ಕನಿಷ್ಠ ಬೆಳಗ್ಗೆ ಕೆಲಸದ ಸಮಯ, ಶಾಲೆಗೆ ಹೋಗಲು ಹಾಗೂ ಸಂಜೆಯ ವೇಳೆ ಹಿಂದಿರುಗಿ ಬರುವ ಸೂಕ್ತ ಸಮಯದಲ್ಲಿ ಬಸ್‌ನ ವ್ಯವಸ್ಥೆಯನ್ನಾದರೂ ಕಲ್ಪಿಸಿ ಎಂಬುದು ಸ್ಥಳೀಯ ಜನರ ಆಗ್ರಹ.

ಅಧಿಕಾರಿಗಳೊಂದಿಗೆ
ಚರ್ಚಿಸಿ ಕ್ರಮ
ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ನರ್ಮ್ ಬಸ್‌ ಓಡಾಟ ಆರಂಭಿಸಲು ಅವಕಾಶ ಇದೆಯೇ ಎಂದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಡಾ| ರಾಜೇಂದ್ರ ಕೆ.ವಿ.,
ಜಿಲ್ಲಾಧಿಕಾರಿ, ದ.ಕ.

ಪರಿಶೀಲಿಸಲಾಗುವುದು
ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಂಚಾಡಿಗೆ ಹಾಗೂ ಸುರತ್ಕಲ್‌ ಭಾಗವಾಗಿ ಎರಡು ಬಸ್‌ಗಳು ಓಡಾಡುತ್ತಿವೆ. ಜನ ವಸತಿ ಪ್ರದೇಶ ಹೆಚ್ಚಿದ್ದಲ್ಲಿ ಜನರ ಮನವಿ ಮೇರೆಗೆ ನರ್ಮ್ ಬಸ್‌ ಓಡಾಟ ನಡೆಸಲು ಅಡ್ಡಿಯಿಲ್ಲ. ಮನವಿ ಪರಿಶೀಲಿಸಲಾಗುವುದು.
-ಡಾ| ಭರತ್‌ ಶೆಟ್ಟಿ ವೈ.,
ಶಾಸಕರು ಮಂಗಳೂರು ಉತ್ತರ

ಟಾಪ್ ನ್ಯೂಸ್

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.