“ಕ್ರೀಡಾ ಸಾಧಕರಾಗಲು ಅವಕಾಶ ಸಿಗಬೇಕು’
ಅಂತರ್ಶಾಲಾ ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಗೆ ಚಾಲನೆ
Team Udayavani, Jul 17, 2019, 5:00 AM IST
ಹಳೆಯಂಗಡಿ: ಉತ್ತಮ ಕ್ರೀಡಾ ಸಾಧಕರಾಗಲು ಅವಕಾಶ ಸಿಗುವಂತಾಗಬೇಕು. ಹಳೆಯಂಗಡಿಯಂತಹ ಗ್ರಾಮೀಣ ಭಾಗದಲ್ಲಿ ಟಾರ್ಪೋಡೇಸ್ ಕ್ಲಬ್ನಿಂದ ನಡೆಯುತ್ತಿರುವ ಕ್ರೀಡಾ ಯೋಜನೆ ಮಾದರಿ ಯಾಗಿದೆ ಎಂದು ತಲಪಾಡಿ ಶಾರದಾ ವಿದ್ಯಾನಿಕೇತನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಆರ್. ವಿನೋದ್ ಹೇಳಿದರು.
ಹಳೆಯಂಗಡಿಯ ಟಾರ್ಪೋಡೇಸ್ ನ್ಪೋರ್ಟ್ಸ್ ಕ್ಲಬ್ನ ಸಂಯೋಜನೆಯಲ್ಲಿ ಕ್ಲಬ್ನ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡ ಜಿಲ್ಲಾ ಮಟ್ಟದ ಅಂತರ್ ಶಾಲಾ ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿವಿಧ ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕರಾದ ಮಂಗಳೂರಿನ ಸೈ.ಆಗ್ನೇಸ್ನ ದೇವಿಕಾ, ಮೌಂಟ್ ಕಾರ್ಮೆಲ್ನ ಕ್ಲಾರಾ, ಎಸ್ಎಂಎಸ್ ಬ್ರಹ್ಮಾವರದ ಭಾಸ್ಕರ್, ಉಡುಪಿ ಶಾರದಾ ರೆಸಿಡೆನ್ಶಿಯಲ್ ಶಾಲೆಯ ಸುಕೇಶ್, ಟಾರ್ಪೋಡೇಸ್ನ ಟೇಬಲ್ ಟೆನ್ನಿಸ್ನ ತರಬೇತುದಾರ ಅಶ್ವಿನ್ ಪಡುಕೋಣೆ, ಬಾಡ್ಮಿಂಟನ್ ತರಬೇತುದಾರ ಸಂತೋಷ್ ಖಾರ್ವಿ, ಪ್ರತಾಪ್ ಶೆಟ್ಟಿ, ಕೆ.ಪಿ. ಸತೀಶ್, ಭಾಗ್ಯರಾಜ್, ದೀಪಕ್ ಕೋಟ್ಯಾನ್, ನವನೀತ್, ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು. ಟಾರ್ಪೋಡೇಸ್ ಸ್ಪೋಟ್ಸ್ ಕ್ಲಬ್ನ ಅಧ್ಯಕ್ಷ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.