ತುಳು ಭಾಷೆಯಲ್ಲಿದೆ 6 ಸಾವಿರಕ್ಕೂ ಹೆಚ್ಚು ಪುಟ; ನಾಲ್ಕು ವರ್ಷ ಪೂರೈಸಿದ ತುಳು ವಿಕಿಪೀಡಿಯ


Team Udayavani, Aug 8, 2020, 1:14 PM IST

ತುಳು ಭಾಷೆಯಲ್ಲಿದೆ 6 ಸಾವಿರಕ್ಕೂ ಹೆಚ್ಚು ಪುಟ; ನಾಲ್ಕು ವರ್ಷ ಪೂರೈಸಿದ ತುಳು ವಿಕಿಪೀಡಿಯ

ಮಹಾನಗರ: ತುಳು ಭಾಷೆ, ಸಂಸ್ಕೃತಿ ಹೆಚ್ಚಿಸುವ ನಿಟ್ಟಿನಲ್ಲಿ ಇರುವ ಪ್ರಮುಖ ತಾಣವಾದ ತುಳು ವಿಕಿಪೀಡಿಯ ಆ. 5ಕ್ಕೆ ನಾಲ್ಕು ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದೆ. ತುಳು ವಿಕಿಪೀಡಿಯಾದಲ್ಲಿ ಸದ್ಯ 1,350ಕ್ಕೂ ಮಿಕ್ಕಿ ಪರಿಪೂರ್ಣ ಲೇಖನಗಳ ಸಂಗ್ರಹ ಒಳಗೊಂಡಿದ್ದು, 6 ಸಾವಿರಕ್ಕೂ ಹೆಚ್ಚು ಪುಟಗಳಿವೆ.

ತುಳು ಭಾಷೆ ಬೆಳೆಸಿ, ತುಳು ಭಾಷೆ ಯಲ್ಲಿಯೇ ಲೇಖನಗಳ ಸಂಗ್ರಹ ಮಾಡುವ ಉದ್ದೇಶದಿಂದ ಈಗಾಗಲೇ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ಕಟ್ಟಲಾಗಿದೆ. ಅದೇರೀತಿ, ಕೆಲವೊಂದು ಕಾಲೇಜುಗಳಲ್ಲಿ “ವಿಕಿಪೀಡಿಯ ಸ್ಟೂಡೆಂಟ್‌ ಅಸೋಸಿಯೇಶನ್‌’ ಕೂಡ ನಿರ್ಮಿ ಸಲಾಗಿದೆ. ಈ ತಂಡದ ವಿದ್ಯಾರ್ಥಿಗಳು ತುಳು ಸಹಿತ ಇತರ ಭಾಷೆಗಳಲ್ಲಿ ಲೇಖನಗಳನ್ನು ವಿಕಿಪೀಡಿಯಕ್ಕೆ ಸಂಪಾದನೆ ಮಾಡುತ್ತಾರೆ. ಕರಾವಳಿಯಲ್ಲಿ ತುಳು ಭಾಷೆ ಇದೀಗ ಪಠ್ಯದ ವಿಷಯವಾಗಿದೆ. ವಿದ್ಯಾರ್ಥಿಗಳು ತುಳು ಭಾಷೆಯಲ್ಲಿಯೂ ಪರೀಕ್ಷೆ ಬರೆಯುತ್ತಿದ್ದಾರೆ.

ದೇಶದುದ್ದಗಲಕ್ಕೂ ಇರುವ ಮಂದಿಗೆ ಆನ್‌ಲೈನ್‌ನಲ್ಲಿ ತುಳು ಭಾಷೆಯ ಗುಣಮಟ್ಟದ ಲೇಖನಗಳು ಸಿಗಬೇಕು. ಇದಕ್ಕೆ ಹೆಚ್ಚಿನ ತುಳು ಲೇಖನಗಳು ವಿಕಿಪೀಡಿಯ ಸೇರಬೇಕೆಂಬ ಉದ್ದೇಶದಿಂದ ತಂಡವೊಂದು ಈಗಾಗಲೇ ವಿದ್ವಾಂಸರ ಮನೆಗಳಿಗೆ ತೆರಳಿ ಅವರ ಸಲಹೆ ಪಡೆಯುತ್ತಿದೆ.  ಮೊದಲನೇ ಹಂತದಲ್ಲಿ ವಿದ್ವಾಂಸರಾದ ಪ್ರೊ| ಅಮೃತ ಸೋಮೇಶ್ವರ, ಪ್ರೊ| ಬಿ.ಎ. ವಿವೇಕ್‌ ರೈ, ಪ್ರೊ| ಎ.ವಿ. ನಾವಡ ಮೊದಲಾದವರ ಮನೆಗೆ ತೆರಳಿ ವಿಕಿಪೀಡಿಯಾ ಯೋಜನೆಗಳನ್ನು ವಿವರಿಸಿ, ಅವರ ಬಳಿ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ.

2007ರಲ್ಲಿ ಆರಂಭ
ತುಳು ವಿಕಿಪೀಡಿಯಾದಲ್ಲಿ ಸುಮಾರು 1,382ಕ್ಕೂ ಹೆಚ್ಚಿನ ಲೇಖನಗಳಿವೆ. 2007ರಲ್ಲಿ ಅಂತರ್ಜಾಲದಲ್ಲಿ ತುಳು ವಿಕಿಪೀಡಿಯ ಪ್ರಾರಂಭವಾಯಿತು. 2014ರ ಮಾರ್ಚ್‌ನಲ್ಲಿ ಇದರಲ್ಲಿ 135 ಲೇಖನಗಳಿದ್ದವು. ಡಿಸೆಂಬರ್‌ ವೇಳೆಗೆ ಈ ಸಂಖ್ಯೆ 750ಕ್ಕೆ ಏರಿಕೆಯಾಯಿತು. 2015 ಫೆ. 2ರಂದು ತುಳುವಿನ 789 ಲೇಖನ ಲಭ್ಯವಿದ್ದವು. 2014ರ ಡಿಸೆಂಬರ್‌ನಲ್ಲಿ ಅಡ್ಯಾರಿನಲ್ಲಿ ನಡೆದ ವಿಶ್ವ ತುಳುವೆರೆ ಪರ್ಬದ ಬಳಿಕ ತುಳು ವಿಕಿಪೀಡಿಯ ಆಸಕ್ತರ ಸಂಖ್ಯೆ ಹೆಚ್ಚಿತು. ಮಂಗಳೂರು, ಉಡುಪಿಯಲ್ಲಿ ಹಲವು ಕಾರ್ಯಾಗಾರ, ಸಂಪಾದನೋತ್ಸವಗಳು ನಡೆದ ಬಳಿಕ ಲೇಖನಗಳ ಸಂಖ್ಯೆ ಹೆಚ್ಚಳದಿಂದ 2016ರ ಆಗಸ್ಟ್‌ 5ರಿಂದ ಸ್ವತಂತ್ರ ವಿಶ್ವಕೋಶವಾಗಿ ರೂಪುಗೊಂಡಿತು. ಪ್ರಸ್ತುತ 1,350ಕ್ಕೂ ಹೆಚ್ಚು ಪರಿಪೂರ್ಣ ಲೇಖನಗಳಿವೆ.

ತುಳು ಭಾಷೆಯ ಪದದ ಅರ್ಥ, ಸಮಾನಾರ್ಥಕ ಪದ, ತುಳು ಭಾಷೆಗೆ ಇತರ ಭಾಷೆಯಲ್ಲಿ ಅರ್ಥ ತಿಳಿಸುವಂತಹ ತುಳು ಭಾಷೆಯ ವಿಕ್ಷನರಿ ಕೆಲಸಗಳು ಕೆಲವು ವರ್ಷಗಳಿಂದ ಪ್ರಾರಂಭವಾಗಿದೆ. ಈಗಾಗಲೇ ತುಳು ವಿಕ್ಷನರಿಯಲ್ಲಿ 700ಕ್ಕೂ ಮಿಕ್ಕಿ ಪದಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

ಮತ್ತಷ್ಟು ಮಂದಿ ತೊಡಗಬೇಕು
ತುಳು ವಿಕಿಪೀಡಿಯಾ ನಾಲ್ಕು ವರ್ಷ ಪೂರೈಸಿ, 5ನೇ ವರ್ಷಕ್ಕೆ ಕಾಲಿಟ್ಟಿದೆ. ಈಗಾಗಲೇ ಸುಮಾರು 1,382ಕ್ಕೂ ಮಿಕ್ಕಿ ಲೇಖನ, 6 ಸಾವಿರಕ್ಕೂ ಮಿಕ್ಕಿ ಪುಟ, 700ಕ್ಕೂ ಹೆಚ್ಚು ವಿಕ್ಷನರಿಗಳಿವೆ. ತುಳು ವಿಕಿಪೀಡಿಯಾಕ್ಕೆ ಸುಮಾರು 30ಕ್ಕೂ ಮಿಕ್ಕಿ ಮಂದಿ ಸಕ್ರಿಯ ಬರಹಗಾರರಿದ್ದು, ಮತ್ತಷ್ಟು ಮಂದಿ ವಿಕಿಪೀಡಿಯ ಬರವಣಿಗೆಯಲ್ಲಿ ಆಸಕ್ತಿ ವಹಿಸಬೇಕು.
 - ಡಾ| ವಿಶ್ವನಾಥ ಬದಿಕಾನ, ಕರಾವಳಿ ವಿಕಿಮೀಡಿಯನ್ಸ್‌ ಯೂಸರ್‌ ಗ್ರೂಪ್‌ ಅಧ್ಯಕ್ಷ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.