ಪಾಸ್ ಗೊಂದಲ: ಕಾಸರಗೋಡಿನವರು ತಲಪಾಡಿ ಗಡಿ ಭಾಗಕ್ಕೆ ಆಗಮಿಸಿ ವಾಪಸ್
Team Udayavani, Jun 5, 2020, 10:16 AM IST
ಸಾಂದರ್ಭಿಕ ಚಿತ್ರ
ಉಳ್ಳಾಲ: ಕರ್ನಾಟಕ – ಕೇರಳ ಗಡಿ ಪ್ರದೇಶದವರು ದ.ಕ. ಜಿಲ್ಲೆ ಮತ್ತು ಕಾಸರಗೋಡು ವ್ಯಾಪ್ತಿಯಲ್ಲಿ ದೈನಂದಿನ ಕೆಲಸ ಕಾರ್ಯಗಳಿಗೆ ಎರಡೂ ಜಿಲ್ಲೆಗಳು ಪಾಸ್ ವ್ಯವಸ್ಥೆ ಮಾಡಿದ್ದು, ಕಾಸರಗೋಡು ಜಿಲ್ಲಾಡಳಿತದ ಪಾಸ್ ಪಡೆದು ದ.ಕ. ಜಿಲ್ಲೆಯವರು ಕಾಸರಗೋಡಿನಲ್ಲಿ ಕೆಲಸ ಕಾರ್ಯ ಪೂರೈಸಿ ಮರಳಿದ್ದಾರೆ. ಆದರೆ ಕಾಸರಗೋಡಿನವರಿಗೆ ದ.ಕ. ಜಿಲ್ಲಾಡಳಿತದ ಪಾಸ್ ಅವ್ಯವಸ್ಥೆಯಿಂದ ಸಂಜೆಯವರೆಗೂ ಪಾಸ್ ದೊರಕದ ಹಿನ್ನೆಲೆಯಲ್ಲಿ ತಲಪಾಡಿ ಗಡಿ ಭಾಗಕ್ಕೆ ಆಗಮಿಸಿ ವಾಪಸಾದ ಘಟನೆ ಗುರುವಾರ ಸಂಭವಿಸಿದೆ. ದ.ಕ. ಜಿಲ್ಲೆ ಪ್ರವೇಶಕ್ಕೆ ಇ-ಪಾಸ್ ಪಡೆಯಲು ಅರ್ಜಿ ಸಲ್ಲಿಸಿದ ಮಂದಿಗೆ ರೆಫರೆನ್ಸ್ ನಂ. ದೊರೆತಿತ್ತು. ಅದನ್ನು ಹಿಡಿದು ಹಲವು ಮಂದಿ ಮಂಗಳೂರಿಗೆ ಬಿಡುವಂತೆ ತಲಪಾಡಿ ಗೇಟಿಗೆ ಬಂದಿದ್ದಾರೆ. ಆದರೆ ಜಿಲ್ಲಾಡಳಿತದ ಆದೇಶದಂತೆ ಇ-ಪಾಸ್ ಇದ್ದಲ್ಲಿ ಮಾತ್ರ ಮಂಗಳೂರಿಗೆ ಬಿಡುವಂತೆ ಸೂಚಿಸಲಾಗಿದ್ದು, ರೆಫರೆನ್ಸ್ ನಂ. ಪಡೆದವರಿಗೆ ಆವಕಾಶ ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.