ಸುರತ್ಕಲ್ ಹೊಸಬೆಟ್ಟು ಪರಿಸರದಲ್ಲಿ ಮನೆ, ದೈವಸ್ಥಾನಗಳಲ್ಲಿ ಸರಣಿ ಕಳ್ಳತನ
Team Udayavani, Jan 12, 2021, 1:46 PM IST
ಸುರತ್ಕಲ್: ಸುರತ್ಕಲ್ ಸಮೀಪದ ಹೊಸಬೆಟ್ಟು ಹೊಯಿಗೆ ದಿಡ್ಡು ಪರಿಸರದಲ್ಲಿ ಸರಣಿ ಕಳ್ಳತನದ ಘಟನೆ ನಡೆದಿದೆ.
ರವಿವಾರ ರಾತ್ರಿ ಇಲ್ಲಿನ ದೈವಸ್ಥಾನವೊಂದಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಕಡ್ಸಲೆ, ಬೆಳ್ಳಿ ಕೊಡೆ, ಕಾಣಿಕೆ ಡಬ್ಬಿಯ ಹಣವನ್ನು ಕದ್ದೊಯ್ದಿದ್ದಾರೆ.
ಸೋಮವಾರ ರಾತ್ರಿ ಮನೆಯ ದೈವಸ್ಥಾನಕ್ಕೆ ನುಗ್ಗಿ ದೈವದ ಕಡ್ಸಲೆ, ಬೆಳ್ಳಿ ಮೂರ್ತಿ, ಬೆಳ್ಳಿ ಕೊಡೆ, ಕದ್ದಿದ್ದಾರೆ.ಇದೇ ಜಾಗದಲ್ಲಿ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ಬಂಗಾರದ ಸರ, ನಗದು ಕದ್ದಿದ್ದಾರೆ.
ಇದನ್ನೂ ಓದಿ:ಕೇಂದ್ರದ ಮೂರು ಕೃಷಿ ಕಾಯ್ದೆಗೆ ತಾತ್ಕಾಲಿಕ ತಡೆ , ಸಮಿತಿ ರಚನೆ: ಸುಪ್ರೀಂ ತೀರ್ಪು
ಸ್ಥಳಕ್ಕೆ ಪೊಲೀಸರು, ಶ್ವಾನ ದಳ ಆಗಮಿಸಿ ಕಳ್ಳರ ಹೆಜ್ಜೆ ಗುರುತು ಪತ್ತೆ ಹಚ್ಚಲು ಪ್ರಯತ್ನ ನಡೆಸಿದ್ದಾರೆ. ಕಳೆದ ಬಾರಿ ದೇವಸ್ಥಾನ ಕ್ಕೆ ನುಗ್ಗಿ ಕಳ್ಳರ ಬಂಧನವಾಗಿದ್ದು ಇದೀಗ ಸುರತ್ಕಲ್ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದೆ. ಇದರಿಂದ ಜನರಲ್ಲಿ ಭೀತಿಯುಂಟಾಗಲು ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ
ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’
D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್ ನಲ್ಲಿ 6 ಬೆಡ್ ಮೀಸಲು
May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್ ಯಾತ್ರೆ
Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ
MUST WATCH
ಹೊಸ ಸೇರ್ಪಡೆ
Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ
Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ
Voting ಹದಿನೈದು ನಿಮಿಷ ಕಾದು ಮತ ಹಾಕಿದ ಅನಂತಕುಮಾರ್ ಹೆಗಡೆ!
Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ
Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ