ಸೋಮೇಶ್ವರ: ದಾರಂದ ಬಾಗಿಲಿನ ಸೀಲ್ಡೌನ್ ತೆರವು
Team Udayavani, May 27, 2020, 9:13 PM IST
ದಾರಂದ ಬಾಗಿಲಿನ ಸೀಲ್ಡೌನ್ ಬುಧವಾರ ತೆರವುಗೊಳಿಸಲಾಯಿತು.
ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ದಾರಂದ ಬಾಗಿಲಿನ ಕೋವಿಡ್ ಸೋಂಕಿತ 38 ವರ್ಷದ ಮಹಿಳೆ ಗುಣಮುಖರಾದ ಹಿನ್ನಲೆಯಲ್ಲಿ ಕಂಟೋನ್ಮೆಂಟ್ ವಲಯವಾಗಿದ್ದ ದಾರಂದ ಬಾಗಿಲಿನ ಸೀಲ್ಡೌನ್ ಬುಧವಾರ ತೆರವುಗೊಸಲಾಗಿದೆ. ಮುಂದಿನ 14 ದಿನಗಳವರೆಗೆ ಸೋಂಕಿತ ಮಹಿಳೆಯ ಮನೆ ಮಾತ್ರ ಸೀಲ್ಡೌನ್ಗೆ ಒಳಪಡಲಿದೆ.
ಸೋಮೇಶ್ವರ ಪುರಸಭಾ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ್ ಅವರು ಕಂಟೋನ್ಮೆಂಟ್ ಝೋನ್ನ ತೆರವು ಕಾರ್ಯಕ್ಕೆ ಚಾಲನೆ ನೀಡಿದರು. ಸೀಲ್ಡೌನ್ ತೆರವಿನ ವೇಳೆ ಪೊಲೀಸ್, ಆರೋಗ್ಯ ಇಲಾಖೆ ಸಿಬಂದಿ, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ. ವಿ.ಆಳ್ವ, ಉಳ್ಳಾಲ ಇನ್ಸ್ಪೆಕ್ಟರ್ ಅನಿಲ್ ಕುಮಾರ್, ಜಿ.ಪಂ. ಸದಸ್ಯೆ ಧನಲಕ್ಷ್ಮಿ ಗಟ್ಟಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್ಹೌಸ್, ಗ್ರಾ.ಪಂ. ಸದಸ್ಯರಾದ ಪುರುಷೋತ್ತಮ್, ಗಂಗಾಧರ ಗಟ್ಟಿ, ರಮೇಶ್, ದೀಪಕ್ ಪಿಲಾರ್ ಇದ್ದರು.
ಪಿಲಾರು ದಾರಂದ ಬಾಗಿಲಿನ ಸೊಂಕಿತ ಮಹಿಳೆಯ 19 ವರ್ಷದ ಪುತ್ರಿಯ ಆನಾರೋಗ್ಯದ ಹಿನ್ನಲೆಯಲ್ಲಿ ನಗರದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದಿದ್ದ ಆಸ್ಪತ್ರೆ ಕೊರೊನ ಸೋಂಕಿನ ಪ್ರದೇಶವಾಗಿದ್ದರಿಂದ ಸೀಲ್ಡೌನ್ ಆಗಿತ್ತು.
ಇದೇ ವೇಳೆ ಪುತ್ರಿಯನ್ನು ನೋಡಿಕೊಳ್ಳುತ್ತಿದ್ದ ದಾರಂದ ಬಾಗಿಲಿನ ಮಹಿಳೆ ಮೇ 13ರಂದು ಕೊರೊನ ಪಾಸಿಟಿವ್ ಆಗಿದ್ದರಿಂದ ಸೋಂಕಿತ ಮಹಿಳೆಯ ಮನೆ ಸೇರಿದಂತೆ ಸುತ್ತಲಿನ 95 ಮನೆಗಳ 430 ಜನರು, 10 ಅಂಗಡಿ ಸೇರಿದಂತೆ ವಾಣಿಜ್ಯ ಮಳಿಗೆಗಳು ಕಂಟೋನ್ಮೆಂಟ್ ಝೋನ್ ಆಗಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ