ಉರ್ವಸ್ಟೋರ್:ಸಾರ್ವಜನಿಕ ಮೈದಾನ ಅಭಿವೃದ್ಧಿಗೆ ಸಿದ್ಧತೆ;ಗಬ್ಬೆದ್ದು ಹೋಗಿದ್ದ ಶೌಚಾಲಯ ನೆಲಸಮ
Team Udayavani, Oct 29, 2022, 1:21 PM IST
ಮಹಾನಗರ: ಉರ್ವಸ್ಟೋರ್ನ ಸಾರ್ವಜನಿಕ ಮೈದಾನವನ್ನು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ.
ಮೈದಾನದಲ್ಲಿರುವ ಶೌಚಾಲಯ ಗಬ್ಬೆದ್ದು ಹೋಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಆದ್ದರಿಂದ ತತ್ಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಶ್ರೀ ರಾಮ ಸೇನೆ ವತಿಯಿಂದ ಉರ್ವಸ್ಟೋರ್ ಜಂಕ್ಷನ್ನಲ್ಲಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದರಿಂದ ಎಚ್ಚೆತ್ತ ಸ್ಥಳೀಯಾಡಳಿತ ಶೌಚಾಲಯ ಸಹಿತ ಸಂಪೂರ್ಣ ಮೈದಾನವನ್ನು ಅಭಿವೃದ್ಧಿ ಮಾಡಲು ಸಿದ್ಧತೆ ನಡೆದಿದ್ದು, ನ. 2ರಂದು ಗುದ್ದಲಿ ಪೂಜೆ ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ.
ಫ್ಲೆಕ್ಸ್ ತೆರವು
ಸಾರ್ವಜನಿಕ ಕಾರ್ಯಕ್ರಮಗಳಿಗೆ ಉಪಯೋಗಿಸಲ್ಪಡುವ ಮೈದಾನ ಶೌಚಾಲ ಯದ ಅವ್ಯವಸ್ಥೆಯಿಂದ ಡೆಂಗ್ಯೂ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡುವ ತಾಣವಾ ಗಿತ್ತು. ಮನುಷ್ಯನಾದವನು ಶೌಚಾಲಯ ದೊಳಗೆ ಕಾಲಿಡುವ ಪರಿಸ್ಥಿತಿ ಇರಲಿಲ್ಲ. ಹತ್ತಿರ ಹೋಗುತ್ತಿದ್ದಂತೆ ಗಬ್ಬು ನಾತ ಮೂಗಿಗೆ ಬಡಿಯುತ್ತಿತ್ತು. ಸರಿಯಾದ ನೀರಿನ ವ್ಯವಸ್ಥೆಯೂ ಇರಲಿಲ್ಲ. ಕೊನೆಗೂ ಮಂಗಳವಾರ ಮಧ್ಯಾಹ್ನ ಸ್ಥಳೀಯ ಪಾಲಿಕೆ ಸದಸ್ಯ ಗಣೇಶ್ ಕುಲಾಲ್ ನೇತೃತ್ವದಲ್ಲಿ ಶೌಚಾಲಯ ನೆಲಸಮಗೊಳಿಸಲಾಯಿತು. ಮೈದಾನದ ಅಭಿವೃದ್ಧಿ ಕುರಿತಂತೆ ಫ್ಲೆಕ್ಸ್ ಅಳವಡಿಸಿದವರ ಜತೆ ಅವರು ಮಾತುಕತೆ ನಡೆಸಿದ ಬಳಿಕ ಫ್ಲೆಕ್ಸ್ ತೆರವುಗೊಳಿಸಿದ್ದಾರೆ.
ರಂಗ ಮಂದಿರ ಸಹಿತ ಅಭಿವೃದ್ಧಿ
ಶೌಚಾಲಯದ ಪಕ್ಕದಲ್ಲೇ ಹಳೆಯ ಸ್ಟೇಜ್ ಕೂಡ ಇತ್ತು. ಅದು ಉಪಯೋಗಿಸಲು ಸಾಧ್ಯವಿಲ್ಲದಷ್ಟು ಹಾಳಾಗಿತ್ತು. ಮುಂದಿನ ದಿನ ದಿನಗಳ್ಲಲಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ರಂಗಮಂದಿರ ಸಹಿತ, ಮೈದಾನದ ಅಭಿವೃದ್ಧಿಯಾಗಲಿದೆ. ಜತೆಗೆ ಮೈದಾನದೊಳಗೆ ಅನಗತ್ಯವಾಗಿ ಪ್ರವೇಶಿಸುವುದನ್ನು ತಡೆಯಲು ಆವರಣ, ಗೇಟ್ ಕೂಡ ನಿರ್ಮಾಣವಾಗಲಿದೆ.
ಬೇರೆ ಶೌಚಾಲಯ ಇಲ್ಲ
ಉರ್ವಸ್ಟೋರ್ನ ಸಾರ್ವಜನಿಕರ ಮೈದಾನದಲ್ಲಿ ಯಕ್ಷನಾಗ, ನಾಟಕ ಸಹಿತ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ತರಕಾರಿ ಮಾರುಕಟ್ಟೆ, ವಿವಿಧ ಅಂಗಡಿ ಮಳಿಗೆಗಳು, ರಿಕ್ಷಾ ಸ್ಟ್ಯಾಂಡ್, ಗೂಡ್ಸ್ ರಿಕ್ಷಾ, ಟೆಂಪೋ ಸ್ಟ್ಯಾಂಡ್ಗಳು ಪಕ್ಕದಲ್ಲೇ ಇವೆ. ಬೇರೆ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲಿಲ್ಲ. ಇರುವ ಶೌಚಾಲಯವನ್ನು ದುರಸ್ತಿಗೊಳಿಸಬೇಕು ಎಂದು ಹಲವು ಸಮಯದಿಂದ ಆಗ್ರಹ ಕೇಳಿ ಬಂದಿತ್ತು.
ಮೈದಾನಕ್ಕೆ ಶೀಘ್ರ ಹೊಸ ರೂಪ ಮೈದಾನದ ಅಭಿವೃದ್ಧಿಗೆ ಪಿಡಬ್ಲ್ಯುಡಿಯಿಂದ 15 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ನ. 2ರಂದು ಗುದ್ದಲಿ ಪೂಜೆಗೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದ್ದು, ಶೀಘ್ರ ಮೈದಾನಕ್ಕೊಂದು ಹೊಸ ರೂಪ ನೀಡಲಾಗುವುದು. -ಗಣೇಶ್ ಕುಲಾಲ್, ಪಾಲಿಕೆ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!
Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ
Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!
Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ