ನೀರು ಸೋರಿಕೆ; ದುರಸ್ತಿ ಕಾಮಗಾರಿ
Team Udayavani, Apr 15, 2022, 11:49 AM IST
ಮಹಾನಗರ: ತುಂಬೆಯಿಂದ ಪಣಂಬೂರು ಪಂಪ್ ಹೌಸಿಗೆ ನೀರು ಸರಬರಾಜು ಆಗುವ ಪಣಂಬೂರು ಎಂಸಿಎಫ್ ಸಂಸ್ಥೆಯ ಬಳಿ 900 ಎಂ.ಎಂ. ಮುಖ್ಯ ಕೊಳವೆಯಲ್ಲಿ ನೀರು ಸೋರಿಕೆಯಾಗುತ್ತಿದ್ದು, ಮಹಾನಗರ ಪಾಲಿಕೆಯು ದುರಸ್ತಿ ಕಾಮಗಾರಿ ಕೈಗೊಂಡಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ಕೊಟ್ಟಾರ ಚೌಕಿ, ಕೋಡಿಕಲ್, ಕಾಟಿಪಳ್ಳ, ಸುರತ್ಕಲ್ ಕುಳಾಯಿ ತಡಂಬೈಲ್, ಮುಕ್ಕ ಮುಂತಾದ ಕೆಲವು ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.