ಶಾಲಾ ಖಾತೆಗೆ ಹಣ ಬಂದರೂ ಎಲ್ಕೆಜಿ ಅತಿಥಿ ಶಿಕ್ಷಕರಿಗೆ ತಲುಪದ ವೇತನ
ಕರ್ನಾಟಕ ಪಬ್ಲಿಕ್ ಸ್ಕೂಲ್
Team Udayavani, Sep 24, 2020, 5:13 AM IST
ಸಾಂದರ್ಭಿಕ ಚಿತ್ರ
ಪುತ್ತೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿಯ ಅತಿಥಿ ಶಿಕ್ಷಕರಿಗೆ ಮತ್ತು ಆಯಾಗಳಿಗೆ ಕೊರೊನಾ ಲಾಕ್ಡೌನ್ ಅನಂತರ ಆರು ತಿಂಗಳಿನಿಂದ ವೇತನ ಪಾವತಿ ಆಗಿಲ್ಲ. ವೇತನಕ್ಕೆಂದು ಸರಕಾರದಿಂದ ಶಾಲಾ ಖಾತೆಗೆ ಹಣ ಬಿಡುಗಡೆ ಆಗಿದ್ದರೂ ಅಲ್ಲಿಂದ ಶಿಕ್ಷಕರ, ಆಯಾಗಳ ಖಾತೆಗೆ ಹಣ ಪಾವತಿಗೆ ಸೂಚನೆ ಸಿಗದಿರುವುದು ಪಾವತಿ ತೊಡಕಿಗೆ ಕಾರಣವೆನಿಸಿದೆ.
ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ
ರಾಜ್ಯ ಸರಕಾರವು 2019-20ನೇ ಸಾಲಿನಿಂದ ರಾಜ್ಯಾದ್ಯಂತ ಆಯ್ದ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಎಲ್ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಸರಕಾರಿ ಶಾಲೆಗಳಲ್ಲಿ ತರಗತಿಗಳು ಆರಂಭಗೊಂಡಿದ್ದವು. ಕಳೆದ ಒಂದು ವರ್ಷದಿಂದ ಕೆಪಿಎಸ್ ಸ್ಕೂಲ್ಗಳಲ್ಲಿ ಕಲಿಕೆ ವ್ಯವಸ್ಥೆ ಪ್ರಗತಿಯಲ್ಲಿದೆ. ಬೋಧನೆಗೆ ಹಾಗೂ ಸಹಾಯಕ್ಕಾಗಿ ಸರಕಾರ ಪ್ರತಿ ಶಾಲೆಗೆ ಎರಡು ಅತಿಥಿ ಶಿಕ್ಷಕರನ್ನು ಮತ್ತು ಓರ್ವ ಆಯಾರನ್ನು ನಿಯೋಜಿಸಿ ಮಾಸಿಕ ವೇತನ ನಿಗದಿಪಡಿಸಿತ್ತು.
ಮಂಜೂರಾದರೂ ಪಾವತಿ ಇಲ್ಲ
ಕೆಪಿಎಸ್ ಪೂರ್ವ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿ ಮತ್ತು ಆಯಾರಿಗೆ ಸರಕಾರದಿಂದ 10 ತಿಂಗಳ ಗೌರವ ವೇತನ ಏಕಕಾಲದಲ್ಲಿ ಪಾವತಿ ಮಾಡುವುದು ನಿಯಮ. ಸರಕಾರದಿಂದ ಶಾಲೆಯ ಖಾತೆಗೆ ಹಣ ಜಮಾವಣೆ ಆದ ಬಳಿಕ ಶಾಲಾ ಪ್ರಾಂಶುಪಾಲರು ಶಿಕ್ಷಕಿಯರಿಗೆ, ಸಹಾಯಕರ ಖಾತೆಗೆ ನೀಡುತ್ತಾರೆ. ಕೊರೊನಾ ಲಾಕ್ಡೌನ್ ಅನಂತರವೂ ಶಾಲಾ ಖಾತೆಗೆ ವೇತನ ಪಾವತಿಗೆ ಹಣ ಮಂಜೂರಾಗಿದ್ದು, ಆದರೆ ಈ ವರೆಗೆ ಶಿಕ್ಷಕರಿಗೆ ಸಿಕ್ಕಿಲ್ಲ.
ಆರು ತಿಂಗಳಿನಿಂದ ವೇತನ ಇಲ್ಲ
ಕೊರೊನಾ ಲಾಕ್ಡೌನ್ ಪರಿಣಾಮ ಶಾಲೆ ಆರಂಭವಾಗಿಲ್ಲ. ಆದರೆ ಅತಿಥಿ ಶಿಕ್ಷಕರು, ಆಯಾಗಳು ಶಾಲಾ ದಾಖಲಾತಿ ಸಹಿತ ಶೈಕ್ಷಣಿಕ ಅಗತ್ಯದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರವೇ ಶಾತಿ ಇಲ್ಲದ ಕಾರಣ ತರಗತಿಗಳು ನಡೆದಿಲ್ಲ. ಹೀಗಾಗಿ ಅತಿಥಿ ಶಿಕ್ಷಕರಿಗೆ, ಆಯಾಗಳಿಗೆ ತರಗತಿ ಇಲ್ಲದ ಕಾರಣ ವೇತನ ಪಾವತಿ ಅಗತ್ಯ ಇಲ್ಲ ಎಂಬ ನಿಲುವು ಶಿಕ್ಷಣ ಇಲಾಖೆಯಲ್ಲಿರುವುದೇ ಪಾವತಿ ತಡೆಗೆ ಕಾರಣ ಎನ್ನಲಾಗಿದೆ. ಆದರೆ ಅತಿಥಿ ಶಿಕ್ಷಕರು ಹೇಳುವ ಪ್ರಕಾರ, ಕೊರೊನಾ ಕಾರಣದಿಂದ ಶಾಲೆ ಮುಚ್ಚಿದೆ. ಇದೊಂದು ಅನಿವಾರ್ಯ ಸಂದರ್ಭ. ಉದ್ದೇಶಪೂರ್ವಕ ಗೈರು ಅಲ್ಲ. ನೇಮಕಾತಿ ಸಂದರ್ಭ ಎರಡು ತಿಂಗಳ ರಜಾ ಅವಧಿ ಹೊರತುಪಡಿಸಿ ಉಳಿದ ಎಲ್ಲ ತಿಂಗಳ ವೇತನ ಪಾವತಿಸುವ ವಾಗ್ಧಾನ ಮಾಡಲಾಗಿತ್ತು. ಹತ್ತು ತಿಂಗಳ ವೇತನ ಬಂದಿತ್ತು. ಆದರೆ ಕೊರೊನಾ ರಜಾ ಅವಧಿಯನ್ನು ಕೆಲಸಕ್ಕೆ ಗೈರು ಎಂದು ಪರಿಗಣಿಸಿ ಆರು ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂಬ ಅಳಲು ತೋಡಿಕೊಳ್ಳುತ್ತಾರೆ.
ಕ್ರಮ ಕೈಗೊಳ್ಳಲಾಗುವುದು
ಶಾಲೆಯ ಖಾತೆಗೆ ಹಣ ಜಮೆಯಾಗಿದ್ದರೂ ಶಿಕ್ಷಕರಿಗೆ, ಆಯಾಗಳಿಗೆ ವೇತನ ಏಕೆ ನೀಡಿಲ್ಲ ಎಂಬ ಬಗ್ಗೆ ಅಧಿಕಾರಿಗಳ ಜತೆ ಮಾಹಿತಿ ಪಡೆಯುವೆ. ಸರಕಾರದಿಂದ ಸಿಗಬೇಕಾದ ವೇತನ ಹಾಗೂ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
-ಸಂಜೀವ ಮಠಂದೂರು ಶಾಸಕರು, ಪುತ್ತೂರು
ವೇತನ ಪಾವತಿಸಲಿ
ಕೊರೊನಾ ಲಾಕ್ಡೌನ್ ಅನಂತರ ಎಪ್ರಿಲ್ನಿಂದ ವೇತನ ಬಂದಿಲ್ಲ. ಶಾಲೆಯ ದಾಖಲಾತಿ ಮತ್ತಿತರ ಇಲಾಖೆಯ ಕೆಲಸಗಳಿಗೆ ಶಾಲೆಗೆ ಹೋಗುತ್ತಿದ್ದೇವೆ. ವೇತನ ಹಣ ಶಾಲೆಯ ಖಾತೆಗೆ ಜಮೆ ಆಗಿದೆ ಎಂಬ ಮಾಹಿತಿ ಇದೆ. ಸಂಬಂಧಪಟ್ಟವರು ಗಮನಹರಿಸಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು.
-ಸೌಮ್ಯಾ ಅನಿರುದ್ಧ್, ಅತಿಥಿ ಶಿಕ್ಷಕಿ ಕೆಯ್ಯೂರು ಕೆಪಿಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ