Belthangady; ಕೆಎಸ್ಆರ್ಟಿಸಿ ಬಸ್- ಪಿಕಪ್ ನಡುವೆ ಅಪಘಾತ
Team Udayavani, Jan 3, 2024, 11:39 PM IST
ಬೆಳ್ತಂಗಡಿ: ಮಾಲಾಡಿ ಕೊಲ್ಪೆದಬೈಲು ಪೆಟ್ರೋಲ್ ಪಂಪ್ ಸಮಿಪ ಕೆ.ಎಸ್.ಆರ್.ಟಿ.ಸಿ. ಬಸ್ಸು ಮತ್ತು ಪಿಕಪ್ ಗಾಡಿ ನಡುವೆ ಅಪಘಾತ ನಡೆದ ಘಟನೆ ಜ. 3ರಂದು ನಡೆದಿದೆ. ಹೆದ್ದಾರಿಯ ಕೆಲಸ ನಡೆಯುತ್ತಿದ್ದು ಮಾರ್ಗದಲ್ಲಿ ಮಣ್ಣು ಹಾಕಿದ್ದರಿಂದ ಮಳೆಗೆ ವಾಹನ ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿದೆ.
ಮಳೆಗೆ ಕೆಲವು ದ್ವಿಚಕ್ರ ಚಾಲಕರು ಕೆಸರಿಗೆ ಬಿದ್ದು ವಾಹನ ಚಾಲಕರು ಸಂಚಾರಕ್ಕೆ ಪರದಾಡಿದ ಘಟನೆ ಸಂಭವಿಸಿದೆ ಸುಮಾರು ಒಂದು ಗಂಟೆಗಳ ಕಾಲ ಕೆಸರುಮಯ ರಸ್ತೆಯಲ್ಲಿ ನಿಲ್ಲುವಂತಾಯಿತು.