ಅಡ್ಕಾರು: ಅರಣ್ಯ ಇಲಾಖೆ ತರಬೇತಿ ಭವನ ಲೋಕಾರ್ಪಣೆ
Team Udayavani, Mar 5, 2018, 5:00 PM IST
ಸುಳ್ಯ : ಪುತ್ತೂರು ವಲಯ ಅರಣ್ಯ ವ್ಯಾಪ್ತಿಯ ಅಡ್ಕಾರಿನಲ್ಲಿ ಅರಣ್ಯ ಇಲಾಖೆ ವತಿಯಿಂದ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ತರಬೇತಿ ಭವನವನ್ನು ಅರಣ್ಯ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು.
ಜಿ.ಪಂ. ಮಾಜಿ ಸದಸ್ಯ ಧನಂಜಯ ಅಡ್ಪಂಗಾಯ, ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು, ಅರೆಭಾಷೆ ಅಕಾಡೆಮಿ ಸದಸ್ಯೆ ತಿರುಮಲೇಶ್ವರಿ, ಪುತ್ತೂರು ವಲಯ ಅರಣ್ಯ ಇಲಾಖೆಯ ಎಸಿಎಫ್ ಸುಬ್ರಹ್ಮಣ್ಯ ರಾವ್, ಸುಳ್ಯ ವಲಯದ ಎಸಿಎಫ್ ಜಗನ್ನಾಥ, ಪುತ್ತೂರು ವಲಯ ಅರಣ್ಯಾಧಿಕಾರಿ ಕಾರ್ಯಪ್ಪ, ಉಪ ವಲಯ ಅರಣ್ಯಧಿಕಾರಿ ಯೋಗೀಶ್, ಪ್ರಕಾಶ್, ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಲೋಚನಾ ಅಡ್ಕಾರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಗಂಗಾಧರ ರೈ ಸೋಣಂಗೇರಿ, ಚೆನ್ನಕೇಶವ ಜಾಲ್ಸೂರು, ಶ್ರೀಹರಿ ಕುಕ್ಕುಡೇಲು, ಸುಧೀರ್ ಶೆಟ್ಟಿ ಬಿಳಿನೆಲೆ, ಮಹಮ್ಮದ್ ಪವಾಜ್, ಇಬ್ರಾಹಿಂ, ಬೀರ ಮೊದೀನ್ ಉಪಸ್ಥಿತರಿದ್ದರು.