Bantwal: ನದಿಗೆ ಹಾರಲು ಯತ್ನಿಸಿದ ಯುವಕನ ರಕ್ಷಣೆ
Team Udayavani, Feb 19, 2024, 11:53 PM IST
ಬಂಟ್ವಾಳ: ನೇತ್ರಾವತಿ ನದಿಗೆ ಹಾರಲು ಯತ್ನಿಸಿದ ಯುವಕನೋರ್ವನನ್ನು ಸ್ಥಳೀಯ ಯುವಕರು ರಕ್ಷಿಸಿ ಪೊಲೀಸರಿ ಗೊಪ್ಪಿಸಿದ ಘಟನೆ ಸೋಮವಾರ ಪಾಣೆಮಂಗಳೂರಿನಲ್ಲಿ ನಡೆದಿದೆ.
ಪುತ್ತೂರು ಮೂಲದ ಯುವಕ ನಿಶ್ಚಿತ್ ಬೈಕಿನಲ್ಲಿ ಬಂದು ನದಿಗೆ ಹಾರಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಸ್ಥಳೀಯ ನಾಲ್ಕೈದು ಯುವಕರು ಆತನನ್ನು ತಡೆದು ಪೊಲೀಸರಿಗೆ ಒಪ್ಪಿಸಿದರು.
ಸ್ನಾತಕೋತ್ತರ ಪದವೀಧರ ನಾಗಿರುವ ಯುವಕ ಉದ್ಯೋಗ ಸಿಗದ ಚಿಂತೆಯಲ್ಲಿ ಖನ್ನತೆಗೊಳಗಾಗಿ ಇಂತಹ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ವ್ಯಕ್ತಿಗೆ ಬೆದರಿಕೆ
ಬಂಟ್ವಾಳ: ಪುದು ಗ್ರಾಮದ ಮಾರಿಪಳ್ಳ 10ನೇ ಪುದು ಗ್ರಾಮ ನಿವಾಸಿ ಅಬ್ದುಲ್ ಸಮದ್ ಅವರು ಕುಂಜತ್ಕಲ ನಿವಾಸಿ ರಿಜ್ವಾನ್ ಎಂಬಾತ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.