ಬೆಳ್ತಂಗಡಿ: ಪುಟಾಣಿಗಳ ಮೇಲೆ ವೃಕ್ಷ ರಾಜನ ಕರಿನೆರಳು


Team Udayavani, May 22, 2024, 3:24 PM IST

ಬೆಳ್ತಂಗಡಿ: ಪುಟಾಣಿಗಳ ಮೇಲೆ ವೃಕ್ಷ ರಾಜನ ಕರಿನೆರಳು

ಬೆಳ್ತಂಗಡಿ: ಇನ್ನೇನು ಮಳೆಗಾಲ ಸಮೀಪಿಸುತ್ತಿದೆ. ಅ, ಆ, ಇ, ಈ ಕಲಿಕೆಗೆ ಪುಟಾಣಿ ಮಕ್ಕಳು ಅಂಗನವಾಡಿ ಕೇಂದ್ರದತ್ತ ಹೆಜ್ಜೆ ಇಡುವ ಸಮಯವೂ ಬಂದಿದೆ. ಆದರೆ ವರುಣ ಆರ್ಭಟಿಸಿದರೆ ಮಕ್ಕಳ ತಲೆ ಮೇಲಿರುವ ಸೂರು ಎಷ್ಟು ಸದೃಢ ಎಂಬುದರೆಡೆಗೆ ನಮ್ಮ ಕಾಳಜಿಯಾಗಿದೆ.

ಇಲಾಖೆ ಸುತ್ತೋಲೆಯಂತೆ 100ರಿಂದ 150 ಕುಟುಂಬಗಳಿದ್ದಲ್ಲಿ ಒಂದು ಅಂಗನವಾಡಿ ತೆರೆಯಲು ಅರ್ಹವಾಗಿದೆ. ತಾಲೂಕಿನ 81
ಗ್ರಾಮಗಳಿಗೆ ಸಂಬಂಧಿಸಿದಂತೆ 325 ಅಂಗನವಾಡಿ ಕೇಂದ್ರಗಳಿವೆ. ಅವುಗಳಲ್ಲಿ 6 ತಿಂಗಳಿಂದ 3 ವರ್ಷದವರೆಗೆ 7723
ಪುಟಾಣಿಗಳಿದ್ದರೆ, 3 ವರ್ಷದಿಂದ 6 ವರ್ಷದವರೆಗೆ 6682 ಪುಟಾಣಿಗಳ ದಾಖಲಾತಿಯಿದೆ. 325 ರಲ್ಲಿ 122 ಕಟ್ಟಡ ಇಂದಿಗೂ ಹಂಚಿನ ಮೇಲ್ಛಾವಣಿಯಾಗಿದ್ದು, 200 ಕೇಂದ್ರ ಆರ್‌ಸಿಸಿ ಕಟ್ಟಡ ಹೊಂದಿದೆ.

ಅಂಗನವಾಡಿ ದುರಸ್ತಿ
ದುರಸ್ತಿ ಅಗತ್ಯವಾಗಿದ್ದ ತಾಲೂಕಿನ 25 ಅಂಗನವಾಡಿಗಳಿಗೆ 2023-24ರ ಸಾಲಿನಲ್ಲಿ 22.49 ಲಕ್ಷ ರೂ. ಮೊತ್ತದ ಇಲಾಖೆ ಅನುದಾನದಲ್ಲಿ ದುರಸ್ತಿ ಕಾರ್ಯ ನಡೆಸಲಾಗಿದೆ. ಮಾತ್ರವಲ್ಲದೆ ಮಳೆಗಾಲ ಪೂರ್ವವಾಗಿ 2023-24ನೇ ಸಾಲಿನ ಮಳೆಹಾನಿ ಅನುದಾನದಡಿ ತಲಾ 2 ಲಕ್ಷ ರೂ. ನಂತೆ 37 ಅಂಗನವಾಡಿಗಳಿಗೆ 74 ಲಕ್ಷ ರೂ. ಮೊತ್ತದಲ್ಲಿ ಹೆಂಚು, ರಿಪೇರಿ, ಗೋಡೆ, ಪಕ್ಕಾಸು ಇತರ ಅಗತ್ಯ ನೆರವು ಒದಗಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ
ಆಗ್ನೆಸ್‌ ತಿಳಿಸಿದ್ದಾರೆ.

ತಡೆಗೋಡೆ ಇಲ್ಲದ ಕಾಲು ಸಂಕ ದಾಟಿ ಬರುವ ಮಕ್ಕಳು ಮಳೆಗಾಲದಲ್ಲಿ ತೋಡು ದಾಟಿ ಬರುವ ಕೇಂದ್ರಗಳ ಪೈಕಿ ಬಂದಾರು ಗ್ರಾಮದ ಬುಳೇರಿ ಕೇಂದ್ರದ ಮೊಗ್ರು ಎಂಬಲ್ಲಿಂದ 5 ಮಕ್ಕಳು ಕಾಲು ಸಂಕ ದಾಟಿ ಬರುವವರಿದ್ದಾರೆ. ಇಲ್ಲಿ ಕಾಲು ಸಂಕಕ್ಕೆ ತಡೆಗೋಡೆಯಿಲ್ಲ. ಮಿತ್ತಬಾಗಿಲು ಗ್ರಾಮದ ಕುಕ್ಕಾವು ಬಳಿ 3 ಮಕ್ಕಳು, ದಿಡುಪೆ ಬಳಿ 5 ಮಕ್ಕಳು ಕಾಲುಸಂಕ ದಾಟಿ
ಬರುವವರಿದ್ದಾರೆ.

ಅಪಾಯದಲ್ಲಿರುವ ಕಟ್ಟಡಗಳು
ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನ ವ್ಯಾಪ್ತಿಯಲ್ಲಿ ತೀರಾ ಹಳೆಯದಾಗಿರುವ ಜತೆಗೆ ಮಳೆಗೆ ಬೀಳಬಹುದಾದ ಅಂಗನವಾಡಿ
ಕೇಂದ್ರಗಳಲ್ಲಿ ಬಂದಾರು ಗ್ರಾಮದ ಬುಳೇರಿ ಅಂಗನವಾಡಿ ಕೇಂದ್ರವಿದ್ದು, ಇಲ್ಲಿಗೆ ಬದಲಿ ವ್ಯವಸ್ಥೆಯಾಗಿ ಬುಳೇರಿ ಸರಕಾರಿ
ಪ್ರಾ.ಶಾಲೆ ಕೊಠಡಿ ಬಳಸಿಕೊಳ್ಳಲಾಗುತ್ತದೆ. ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಮೇಗಿನಮನೆ ಅಂಗನವಾಡಿ ಕಟ್ಟಡ ಹಳೆಯದಾಗಿದ್ದು ಬದಲಿಯಾಗಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದಲ್ಲಿ ಬದಲಿ ಕ್ರಮ ವಹಿಸಲಾಗಿದೆ. ಉಜಿರೆ ಗ್ರಾಮದ ಕಕ್ಕೆಜಾಲು ಅಂಗನವಾಡಿ ಅಪಾಯದಲ್ಲಿದ್ದು ಬದಲಿ ಬಾಡಿಗೆಗೆ ಕಟ್ಟಡ ಬೇಕಾಗಿದ್ದು ಸ್ಥಳೀಯವಾಗಿ ಖಾಸಗಿ ಕಟ್ಟಡವೂ ಲಭ್ಯವಿಲ್ಲದಂತಾಗಿದೆ.

ಕಜಕೆ ಪರಿಸರದಲ್ಲಿ ಆನೆ ಕಾಟ
ಮಲವಂತಿಗೆ ಗ್ರಾಮದ ಕಜಕೆ ಅಂಗನವಾಡಿಗೆ ಬರುವ ಮಕ್ಕಳಿಗೆ ಕಾಡಾನೆ ಭಯವಿದೆ. ಈ ಪ್ರದೇಶ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿದ್ದು, ಆಗಾಗ ಇಲ್ಲಿ ಕಾಡಾನೆ ಉಪಟಳವಿದೆ. ಹೀಗಾಗಿ ಪುಟಾಣಿಗಳ ಜತೆ ಪೋಷಕರಿದ್ದರೂ ಕಾಡಾನೆಗೆ ಭಯ ಪಟ್ಟೇ ಕೇಂದ್ರ  ಸೇರುವಂತಾಗಿದೆ.

*ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Screenshot (5) copy

Vitla: ಮಲೆತ್ತಡ್ಕ ಗೌರಿಮೂಲೆ: ಈಡೇರದ ಸರ್ವಋತು ರಸ್ತೆ ಬೇಡಿಕೆ

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

udAgricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Agricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ

Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

Screenshot (7) copy

Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.