Road Mishap; ಕಾರು – ಸ್ಕೂಟರ್ ಢಿಕ್ಕಿ: 6 ಮಂದಿಗೆ ಗಾಯ
Team Udayavani, Mar 12, 2024, 12:13 AM IST
ವಿಟ್ಲ:ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಎರಡೂ ವಾಹನಗಳಲ್ಲಿದ್ದ ಒಟ್ಟು 6 ಮಂದಿ ಗಾಯಗೊಂಡ ಘಟನೆ ಮಾಣಿ-ಕೊಡಾಜೆ ಗಡಿಭಾಗದಲ್ಲಿ ಸಂಭವಿಸಿದೆ.
ಮಂಗಳೂರು ಕಡೆಯಿಂದ ಸುಳ್ಯದತ್ತ ತೆರಳುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಸ್ಕೂಟರ್ಗೆ ಢಿಕ್ಕಿ ಹೊಡೆಯಿತು. ಸ್ಕೂಟರ್ ನಜ್ಜುಗುಜ್ಜಾಗಿದೆ. ಗಾಯಗೊಂಡವರನ್ನು ಎರಡು ಆ್ಯಂಬುಲೆನ್ಸ್ ಗಳ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಜಾಲ್ಸೂರು ದೇಲಂಪಾಡಿಯ ವಿದ್ಯಾ (20) ಮತ್ತು ಚೈತ್ರಾ (23) ಗಂಭೀರ ಗಾಯಗೊಂಡವರು. ಕಾರಿನ ಚಾಲಕ ಬಂಟ್ವಾಳ ಮೂಲದವರಾಗಿದ್ದು, ಅವರಿಗೂ ಗಾಯವಾಗಿದೆ.
ಚೈತ್ರಾ ಅವರ ಮದುವೆ ಅಂಗವಾಗಿ ಬಟ್ಟೆ ಖರೀದಿಸಲು ಮಂಗಳೂರಿಗೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.