ಕಾರು- ಟ್ಯಾಂಕರ್ ಢಿಕ್ಕಿ: ಕಾರಿನಲ್ಲಿದ್ದ ನಗದು-ದಾಖಲೆ ಪತ್ರ ಕಾಣೆ; ದೂರು
Team Udayavani, Jun 4, 2022, 12:47 AM IST
ಬಂಟ್ವಾಳ: ಬಂಟ್ವಾಳ ಸಮೀಪದ ಚಂಡ್ತಿಮಾರ್ನಲ್ಲಿ ಜೂ. 1ರಂದು ಕಾರು ಮತ್ತು ಟ್ಯಾಂಕರ್ ನಡುವೆ ನಡೆದ ಅಪಘಾತದ ವೇಳೆ ಕಾರಿನಲ್ಲಿದ್ದ ನಗದು ಹಾಗೂ ದಾಖಲೆ ಪತ್ರಗಳು ಕಾಣೆಯಾಗಿರುವುದಾಗಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಗಿದೆ.
ಘಟನೆಯಲ್ಲಿ ಕಾರಿನ ಮಾಲಕ ಮಡಂತ್ಯಾರು ನಿವಾಸಿ ರೋಶನ್ ಸೆರಾವೊ ಸಾವನ್ನಪ್ಪಿದ್ದರು.
ರೋಶನ್ ಅವರು ಕ್ಯಾಟರಿಂಗ್ ಉದ್ಯಮ ನಡೆಸುತ್ತಿದ್ದು, ಮಂಗಳೂ ರಿನಲ್ಲಿ ಮುನ್ನಾ ದಿನ ನಡೆದ ಕಾರ್ಯಕ್ರಮದ ಹಣವನ್ನು ಪಡೆದು ಮಡಂತ್ಯಾರಿಗೆ ಸಾಗುತ್ತಿದ್ದರು. ಅವರಲ್ಲಿದ್ದ ಸುಮಾರು 2 ಲಕ್ಷದ 3 ಸಾವಿರ ರೂ. ನಗದು ಹಾಗೂ ಕಾರಿನ ದಾಖಲೆ ಪತ್ರಗಳು ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಅಪಘಾತದ ದೃಶ್ಯ ಹೆದ್ದಾರಿಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ವೈರಲ್ ಆಗಿದೆ. ಈ ವೇಳೆ ಕಾರಿನಲ್ಲಿದ್ದ ನಗದಿನ ಕಟ್ಟು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಎನ್ನಲಾಗಿದೆ.