ಕಾಣಿಯೂರು: ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ
Team Udayavani, Jun 28, 2018, 3:07 PM IST
ಕಾಣಿಯೂರು: ದ.ಕ. ಜಿಲ್ಲಾ ಹಾಲು ಒಕ್ಕೂಟ ಮತ್ತು ಪಶು ಸಂಗೋಪನಾ ಇಲಾಖೆ ನರಿಮೊಗರು, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕಾ ಶಿಬಿರಕ್ಕೆ ಕಾಣಿಯೂರು ಮಠದ ಗೋಶಾಲೆಯಲ್ಲಿ ಬುಧವಾರ ಚಾಲನೆ ನೀಡಲಾಯಿತು.
ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ| ಸತೀಶ್ ರಾವ್, ನರಿಮೊಗರು ಪಶುವೈದ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಪ್ರಸನ್ನ ಹೆಬ್ಟಾರ್, ಪಶು ವೈದ್ಯಕೀಯ ಪರಿವೀಕ್ಷಕರಾದ ರಮೇಶ್, ಚಾಮಯ್ಯ, ಪುಂಡರೀಕಾಕ್ಷ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅನಂತರಾಮ
ಉಪಾದ್ಯಾಯ,ಉಪಾಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ, ಬಿ., ನಿರ್ದೇಶಕರಾದ ಪದ್ಮಯ್ಯ ಗೌಡ ಅನಿಲ, ಕಾರ್ಯದರ್ಶಿ ಜಗದೀಶ್ ಗೌಡ, ಚಂದ್ರಶೇಖರ್ ಗೌಡ ಬೈತಡ್ಕ, ಕಾಣಿಯೂರು ಮಠದ ಶ್ರೀನಿವಾಸ್ ಪೂದನ್ನಾಯ ಹಾಗೂ ಸಂಘದ ಸಿಬಂದಿ ಉಪಸ್ಥಿತರಿದ್ದರು.