ಕಲ್ಚೆರ್ಪೆ : ಪಯಸ್ವಿನಿ ಒಡಲು ಸೇರುತ್ತಿದೆ ತ್ಯಾಜ್ಯ ರಾಶಿ
Team Udayavani, Jun 15, 2021, 5:29 PM IST
ಅರಂತೋಡು : ಪೆರಾಜೆ ಸಮೀಪದ ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಲ್ಚೆರ್ಪೆ ಎಂಬಲ್ಲಿ ಸುಳ್ಯ ನಗರ ಪಂಚಾಯತ್ ನ ತ್ಯಾಜ್ಯ ಸಂಗ್ರಹ ಸ್ಥಳದಿಂದ ತ್ಯಾಜ್ಯಗಳು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿ ಸುಳ್ಯದ ಜೀವ ನದಿ ಪಯಸ್ವಿನಿಯ ಒಡಲು ಸೇರಿ ನೀರು ಮಲೀನಗೊಳ್ಳುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಘನ ತ್ಯಾಜ್ಯವನ್ನು ಇಲ್ಲಿಗೆ ತಂದು ರಾಶಿ ಹಾಕಲಾಗಿದೆ.ಆದರೆ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡದೆ ಎರಬಿರ್ರಿಯಾಗಿ ಕಸದ ರಾಶಿ ಬಿದ್ದಿದೆ.ಇನ್ನೂ ಕೆಲವೆಡೆ ತ್ಯಾಜ್ಯಗಳ ನಡುವೆ ನೀರು ನಿಂತುಕೊಂಡು ಶೇಖರಣೆಗೊಂಡಿದ್ದು ನಾರುತ್ತಿವೆ.
ಇದರ ಪಕ್ಕವೇ ಪೂಮಲೆ ಗುಡ್ಡೆಯಯಿಂದ ತೋಡೊಂದು ಹರಿದು ಬರುತ್ತಿದ್ದು ಇದರ ಮೂಲಕ ತ್ಯಾಜ್ಯ ಪಯಸ್ವಿನಿ ನದಿ ಸೇರುತ್ತಿದೆ.ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು