ಪುತ್ತೂರು: ಹಣ ವಾರಸುದಾರರಿಗೆ ಮರಳಿಸಿ “ಪ್ರಜ್ವಲಿಸಿದ’ ವಿದ್ಯಾರ್ಥಿಯ ಪ್ರಾಮಾಣಿಕತೆ
Team Udayavani, May 30, 2022, 7:25 AM IST
ಪುತ್ತೂರು: ಭಕ್ತಕೋಡಿ ಎಸ್ಜಿಎಂ ಶಾಲೆಯ ವಿದ್ಯಾರ್ಥಿ ಪ್ರಜ್ವಲ್ ತನಗೆ ದಾರಿಯಲ್ಲಿ ಬಿದ್ದು ಸಿಕ್ಕಿದ 8 ಸಾವಿರ ರೂ. ಹಣವನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ವೀರಮಂಗಲದ ಶ್ರೀ ದೇವಿ ಸ್ಟೋರ್ನ ಬಾಡಿಗೆ ಮನೆಯಲ್ಲಿರುವ ತಮಿಳುನಾಡಿನ ನಿವಾಸಿ, ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಹಣ ಕಳೆದುಕೊಂಡಿದ್ದರು. ಈ ವಿಷಯವನ್ನು ಶ್ರೀ ದೇವಿ ಸ್ಟೋರ್ನ ಮಾಲಕ ವೀರಮಂಗಲ ಶಾಲೆಯಲ್ಲಿ ತಿಳಿಸಿದ್ದರು. ಶಿಕ್ಷಕರು ಈ ವಿಚಾರವನ್ನು ಶಾಲಾ ಮಕ್ಕಳಿಗೆ ತಿಳಿಸಿದ್ದರು. ಭಕ್ತಕೋಡಿ ಎಸ್ಜಿಎಂ ಶಾಲೆಯಿಂದ ಸಂಜೆ ಮನೆಗೆ ತೆರಳುತ್ತಿದ್ದ ಶಾಲೆಯ ಹಿರಿಯ ವಿದ್ಯಾರ್ಥಿ ಪ್ರಜ್ವಲ್ಗೆ ಹಣದ ಕಟ್ಟು ಸಿಕ್ಕಿತ್ತು.
ಮನೆಯವರಲ್ಲಿ ಈ ವಿಷಯ ತಿಳಿಸಿದಾಗ ಪ್ರಜ್ವಲ್ನ ತಂಗಿ ಹಣ ಕಳೆದುಕೊಂಡವರ ಬಗ್ಗೆ ಶಾಲೆಯಲ್ಲಿ ವಿವರ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಳು. ಪ್ರಜ್ವಲ್ನ ತಂದೆ ಲಿಂಗಪ್ಪ ಗೌಡ ಅವರು ಶಾಲಾ ಮುಖ್ಯಗುರುಗಳಿಗೆ ಕರೆ ಮಾಡಿ ಹಣ ಸಿಕ್ಕಿರುವ ವಿಷಯ ತಿಳಿಸಿದರು. ಮರುದಿನ ವಾರಸುದಾರರನ್ನು ಶಾಲೆಗೆ ಕರೆಯಿಸಿ ಹಣ ಹಿಂದಿರುಗಿಸಲಾಯಿತು.
ಹಣ ಕಳೆದುಕೊಂಡಿದ್ದ ವ್ಯಕ್ತಿ ಪ್ರಜ್ವಲ್ಗೆ ಬಹುಮಾನದ ರೂಪದಲ್ಲಿ 500 ರೂ. ಹಾಗೂ ಶಾಲಾ ಮಕ್ಕಳಿಗೆ ಸಿಹಿತಿನಿಸು ಹಂಚಿ ಕೃತಜ್ಞತೆ ಅರ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು