Puttur; ಚುನಾವಣೆ ಘೋಷಣೆಯಾದರೆ ಅಡಿಕೆ ಧಾರಣೆ ಏರಿಕೆ?

ಧಾರಣೆ ಇಳಿಕೆ ನಡುವೆ ಮಾರುಕಟ್ಟೆ ಹೊಸ ಲೆಕ್ಕಾಚಾರ

Team Udayavani, Feb 28, 2024, 7:10 AM IST

Puttur; ಚುನಾವಣೆ ಘೋಷಣೆಯಾದರೆ ಅಡಿಕೆ ಧಾರಣೆ ಏರಿಕೆ?

ಪುತ್ತೂರು: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯ ಧಾರಣೆ ಅಸ್ಥಿರತೆಯ ಆತಂಕಕ್ಕೆ ತಾತ್ಕಾಲಿಕ ಪರಿಹಾರ ಸಿಗುವ ಕಾಲ ಸನ್ನಿಹಿತವಾದಂತಿದೆ; ಕಾರಣ ಸದ್ಯವೇ ಘೋಷಣೆಯಾಗಲಿರುವ ಲೋಕಸಭಾ ಚುನಾವಣೆ. ಹೀಗೊಂದು ಲೆಕ್ಕಾಚಾರ ಮಾರುಕಟ್ಟೆ ಯಲ್ಲಿ ಹರಿದಾಡುತ್ತಿದೆ.

ವಿದೇಶಿ ಅಡಿಕೆ ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿರುವ ಪರಿಣಾಮ ದೇಶೀ ಅಡಿಕೆಯ ಧಾರಣೆ ಕುಸಿತ ಕಂಡಿದೆ. ಅಕ್ರಮ ಆಮದು ತಡೆಯಲು ಸರಕಾರ ಇನ್ನೂ ಬಿಗಿ ಕ್ರಮ ಕೈಗೊಳ್ಳದ ಕಾರಣ ಧಾರಣೆ ಅಸ್ಥಿರತೆಯಲ್ಲಿ ಮುಂದುವರಿದಿದೆ.

ಕ್ಯಾಂಪ್ಕೋ ಮಾರುಕಟ್ಟೆ ಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 325ರಿಂದ 345 ರೂ., ಹಳೆ ಅಡಿಕೆ (ಸಿ) 400ರಿಂದ 410 ರೂ., ಹಳೆ ಅಡಿಕೆ (ಡ) 400ರಿಂದ 425 ರೂ. ತನಕ ಇದೆ. ಕಳೆದ ವರ್ಷ ಹೊಸ ಅಡಿಕೆ 400 ರೂ. ಗಡಿ ದಾಟಿದ್ದರೆ ಹಳೆ ಅಡಿಕೆ 500 ರೂ. ಗಡಿ ದಾಟಿತ್ತು.

ಏನಿದು ಚುನಾವಣೆ
ಲೆಕ್ಕಾಚಾರ?
2024ರ ಮೇಯಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಮಾರ್ಚ್‌ನಲ್ಲೇ ನೀತಿಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಅಂತಾರಾಷ್ಟ್ರೀಯ ಗಡಿಭಾಗಗಳಲ್ಲಿ ಬಿಗಿ ಬಂದೋಬಸ್ತ್, ತಪಾಸಣೆ ನಡೆಯಲಿದ್ದು ಇದರಿಂದ ಅಕ್ರಮವಾಗಿ ಅಡಿಕೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವುದು ನಿಯಂತ್ರಣಕ್ಕೆ ಬರಲಿದೆ. ಇದರಿಂದ ದೇಶೀ ಅಡಿಕೆಗೆ ಧಾರಣೆ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಿದೆ ಮಾರುಕಟ್ಟೆ ಮೂಲಗಳು. ಚುನಾವಣೆ ಸಂದರ್ಭ ದೇಶ-ವಿದೇಶದ ಗಡಿಭಾಗಗಳಲ್ಲಿ ಬಿಗಿ ಭದ್ರತೆ ಸಹಜ. ಆಗ ಇಂತಹ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತವೆ. ಇದರಿಂದ ಅಡಿಕೆ ಕೊರತೆಯಾಗಿ ಅಡಿಕೆ ಆಧಾರಿತ ಉತ್ಪಾದನ ಕಂಪೆನಿಗಳು ದೇಶೀ ಅಡಿಕೆಗೆ ಮೊರೆಹೊಗುವ ಅನಿವಾರ್ಯ ಇದೆ ಅನ್ನುವುದು ಧಾರಣೆ ಏರಿಕೆಯ ಲೆಕ್ಕಾಚಾರ.

ಪಾತಾಳದಲ್ಲಿದ್ದ ಧಾರಣೆ ಏರಿತ್ತು
ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಳಿತ ಸಹಜ. ಪಾತಾಳದಲ್ಲಿದ್ದ ಧಾರಣೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರೀ ಏರಿಕೆ ಕಂಡಿರುವುದನ್ನು ಅಂಕಿ-ಅಂಶ ದೃಢಪಡಿಸುತ್ತದೆ. 1999ರಲ್ಲಿ 160 ರೂ. ಇದ್ದ ಧಾರಣೆ 2023ರಲ್ಲಿ 500 ರೂ.ಗಡಿಗೆ ತಲುಪಿತ್ತು. 1999ರಿಂದ 2011ರ ತನಕ ಕೆಲವು ವರ್ಷಗಳಲ್ಲಿ ಅಡಿಕೆ ಧಾರಣೆ 100 ರೂ. ಒಳಗಿತ್ತು. 2012ರಲ್ಲಿ ಕೆ.ಜಿ.ಗೆ 150 (ಕನಿಷ್ಠ)-190 (ಗರಿಷ್ಠ), 2013ರಲ್ಲಿ 140-150 ರೂ., 2014ರಲ್ಲಿ 150-310 ರೂ., 2015ರಲ್ಲಿ 250-280 ರೂ., 2016ರಲ್ಲಿ 230-260 ರೂ., 2017 ರಲ್ಲಿ 210-260 ರೂ., 2018 ರಲ್ಲಿ 210-280 ರೂ., 2019 ರಲ್ಲಿ 220-250 ರೂ. ತನಕ ಧಾರಣೆ ಇತ್ತು. 2020, 2021ರಲ್ಲಿನ ಕೋವಿಡ್‌ ಕಾಲಘಟ್ಟದಲ್ಲಿ ಅಡಿಕೆ ಧಾರಣೆ ಭಾರೀ ಏರಿಕೆಯತ್ತ ಸಾಗಿತ್ತು. 2022, 2023ರಲ್ಲಿ ಗರಿಷ್ಠ ಹಂತಕ್ಕೆ ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು.

ಅಗತ್ಯವಿದ್ದರಷ್ಟೇ ಮಾರಾಟ ಮಾಡಿ
ಧಾರಣೆ ಇಳಿಯುತ್ತಿದೆ ಎಂದು ಬೆಳೆಗಾರರು ಆತುರಪಟ್ಟು ಅಡಿಕೆ ಮಾರಾಟ ಮಾಡಬಾರದು. ಇದರಿಂದ ಧಾರಣೆಯನ್ನು ಮತ್ತಷ್ಟು ಇಳಿಸುವ ತಂತ್ರಗಾರಿಕೆ ನಡೆಯುವ ಸಾಧ್ಯತೆ ಇದೆ. ಪೂರೈಕೆ ಕುಸಿದಾಗ ಸಹಜವಾಗಿ ಧಾರಣೆ ಏರುತ್ತದೆ.

ಚುನಾವಣೆ ಸಂದರ್ಭ ಅಂತಾರಾಷ್ಟ್ರೀಯ ಗಡಿಗಳಲ್ಲಿ ಬಿಗಿ ತಪಾಸಣೆ ಇರುವುದರಿಂದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಇಂಡೋನೇಶ್ಯಾ, ಬರ್ಮಾ ಮುಂತಾದ ದೇಶಗಳಿಂದ ಆಮದು ಆಗುವ ಅಡಿಕೆಯ ಗುಣಮಟ್ಟ ತುಂಬಾ ಕಳಪೆ. ಇವು ಊಖಖಅಐ ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸುವುದಿಲ್ಲ. ವಶಪಡಿಸಿಕೊಂಡ ಅಡಿಕೆಯ ಗುಣಮಟ್ಟದ ಪರೀಕ್ಷೆಯನ್ನು ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಕಟ್ಟುನಿಟ್ಟಾಗಿ ನಡೆಸಬೇಕೆಂದು ಕ್ಯಾಂಪ್ಕೊ ಪ್ರಧಾನಮಂತ್ರಿಗೆ ಪತ್ರ ಬರೆದು ಆಗ್ರಹಿಸಿದೆ.
– ಕಿಶೋರ್‌ ಕುಮಾರ್‌ ಕೊಡ್ಗಿ, ಕ್ಯಾಂಪ್ಕೊ ಅಧ್ಯಕ್ಷ

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.