Medicine ಅದಲು ಬದಲು : ಔಷಧಾಲಯ ಮಾಲಕರಿಂದ ಕ್ಷಮೆ; ವೆಚ್ಚ ಪಾವತಿ
Team Udayavani, Oct 25, 2023, 11:11 PM IST
ಉಪ್ಪಿನಂಗಡಿ: ವೈದ್ಯರು ಸೂಚಿಸಿದ ಔಷಧವನ್ನು ಔಷಧಾಲಯದ ಸಿಬಂದಿ ಬದಲಾಯಿಸಿ ಬೇರೊಂದು ಔಷಧ ನೀಡಿದ ಪರಿಣಾಮ ರೋಗಿಯೋರ್ವರ ಅನಾರೋಗ್ಯ ಉಲ್ಬಣಿಸಿದ ಘಟನೆಗೆ ಸಂಬಂಧಿಸಿ ತಪ್ಪಿತಸ್ಥ ಔಷಧಾಲಯದ ಮಾಲಕರು ನಷ್ಟ ಮೊತ್ತವನ್ನು ಪಾವತಿಸಿದ ಘಟನೆ ವರದಿಯಾಗಿದೆ.
ಉಪ್ಪಿನಂಗಡಿಯಲ್ಲಿ ವಾಸ್ತವ್ಯ ಇರುವ ಫಾತಿಮಾ (ಹೆಸರು ಬದಲಾಯಿಸಲಾಗಿದೆ) ನರ ದೌರ್ಬಲ್ಯದ ಕಾರಣಕ್ಕೆ ಮಂಗಳೂರಿನ ವೈದ್ಯರಿಂದ ತಪಾಸಣೆ ನಡೆಸಿ, ಅಗತ್ಯ ಔಷಧ ಪಡೆಯುವಂತೆ ಸೂಚಿಸಿದ್ದರು. ವೈದ್ಯರ ಚೀಟಿಯನ್ನು ಅಲ್ಲಿನ ಔಷದಾಲಯವೊಂದಕ್ಕೆ ನೀಡಿದಾಗ ಅವರು ಬೇರೊಂದು ಔಷಧ ನೀಡಿದ್ದರು. ಆ ಔಷಧ ಸೇವಿಸಿದ ರೋಗಿಯ ಅನಾರೋಗ್ಯ ಉಲ್ಬಣಿಸಿದಾಗ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ವೇಳೆ ವೈದ್ಯರು ರೋಗಿ ಈ ಹಿಂದೆ ಪಡೆದುಕೊಂಡ ಔಷಧಗಳನ್ನು ಪರಿಶೀಲಿಸಿದಾಗ ಔಷಧ ಬದಲಾಗಿರುವುದು ತಿಳಿದುಬಂತು. ಬಿಲ್ ಪರಿಶೀಲಿಸಿದಾಗ ಮಂಗಳೂರಿನ ಔಷಧಾಲಯದ ಸಿಬಂದಿಯ ಕರ್ತವ್ಯ ಲೋಪವೇ ಕಾರಣವೆಂದು ತಿಳಿಯಿತು. ಈ ಬಗ್ಗೆ ರೋಗಿಯ ಕುಟುಂಬಸ್ಥರು ಮಂಗಳೂರಿನ ಔಷಧಾಲಯವನ್ನು ಸಂಪರ್ಕಿಸಿ ಔಷಧ ಬದಲಾದ ವಿಷಯ ತಿಳಿಸಿ ದೂರು ನೀಡುವುದಾಗಿ ಎಚ್ಚರಿಸಿದರು.
ಎಚ್ಚೆತ್ತ ಔಷಧಾಲಯದವರು ಸಿಬಂದಿಯ ಪ್ರಮಾದಕ್ಕಾಗಿ ಕ್ಷಮೆಯಾಚಿಸಿ ಆಸ್ಪತ್ರೆ ವೆಚ್ಚ 25,760 ರೂ.ಗಳನ್ನು ಚೆಕ್ ಮೂಲಕ ಪಾವತಿಸಿದ್ದಲ್ಲದೇ ಮುಂದಿನ ಎರಡು ತಿಂಗಳು ರೋಗಿ ತೆಗೆದುಕೊಳ್ಳುವ ಔಷಧದ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ