ರಾಜೇಶ್ ನಾೖಕ್ರಂತಹ ಸರಳ ವ್ಯಕ್ತಿತ್ವವನ್ನು ಕಂಡದ್ದೇ ಅಪರೂಪ: ರುಕ್ಮಯ ಪೂಜಾರಿ
Team Udayavani, May 8, 2023, 3:21 PM IST
ಬಂಟ್ವಾಳ: ಸುದೀರ್ಘ 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ರಾಜೇಶ್ ನಾೖಕ್ರಂತಹ ಸರಳ ವ್ಯಕ್ತಿತ್ವವನ್ನು ಕಂಡದ್ದೇ ಅಪರೂಪ, ಎದುರಾಳಿಗಳ ಟೀಕೆಗೆ ಸಣ್ಣ ಉತ್ತರವನ್ನೂ ಕೊಡದೆ ಕರ್ತವ್ಯವನ್ನು ಮುಂದುವರಿಸಿಕೊಂಡು ಹೋಗುವ ಸಜ್ಜನ ರಾಜಕಾರಣಿ ರಾಜೇಶ್ ನಾೖಕ್ರನ್ನು ಮತ್ತೂಮ್ಮೆ ಗೆಲ್ಲಿಸಲು ಕ್ಷೇತ್ರದ ಜನತೆ ಉತ್ಸುಕರಾಗಿದ್ದಾರೆ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಹೇಳಿದ್ದಾರೆ.
ಮತ್ತೆ ಮತ್ತೆ ಸೀಟಿಗಾಗಿ ಪೈಪೋಟಿ ನಡೆಸುವ ರಾಜಕಾರಣಿಗಳ ಮಧ್ಯೆ ರಾಜೇಶ್ ನಾೖಕ್ ಅವರು ಅಪರೂಪವಾಗಿ ಕಂಡುಬರುತ್ತಿದ್ದು, ಬಹಳ ಹಿಂದೆಯೇ ಚುನಾವಣೆಗೆ ನಿಲ್ಲುವ ಅವಕಾಶ ಇದ್ದರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು. 2013ರಲ್ಲಿ ಸ್ಪರ್ಧಿಸಿ ಸೋತ ಸಂದರ್ಭದಲ್ಲೂ ಇಡೀ ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಸಿ ಜನತೆಯ ಕಷ್ಟವನ್ನು ಆಲಿಸಿದ ಹೆಗ್ಗಳಿಕೆ ರಾಜೇಶ್ ನಾೖಕ್ ಅವರದ್ದಾಗಿದ್ದು, ಒಟ್ಟು ಮೂರು ಬಾರಿ ಪಾದಯಾತ್ರೆಯ ಮಾಡುವ ಮೂಲಕ ದೇಶದಲ್ಲೇ ಅಪರೂಪದ ಶಾಸಕರೆನಿಸಿಕೊಂಡಿದ್ದಾರೆ.
ತನ್ನ ಕುರಿತ ಎಲ್ಲಾ ಟೀಕೆಗಳಿಗೆ ಉತ್ತರ ಕೊಡದೆ ರಾಜೇಶ್ ನಾೖಕ್ ಅವರು ತನ್ನ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರ ನೀಡುವ ಕಾರ್ಯ ಮಾಡಿದ್ದರು. ಕೊರೊನಾದಿಂದ ಮೃತಪಟ್ಟ ಮಹಿಳೆಯರೊಬ್ಬರ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತವಾದಾಗ ತನ್ನ ಜಮೀನಿನಲ್ಲಿ ಶವಸಂಸ್ಕಾರ ಮಾಡಿ ಎನ್ನುವ ಮೂಲಕ ಸರ್ವರ ಪ್ರಶಂಸೆಗೆ ಪಾತ್ರರಾಗಿದ್ದರು ರುಕ್ಮಯ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳಕ್ಕೆ ನಾರಾಯಣ ಗುರು ವಸತಿ ಶಾಲೆ
ಜಿಲ್ಲೆಯ ಮೊದಲ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಬಂಟ್ವಾಳ ಕ್ಷೇತ್ರಕ್ಕೆ ತಂದು ಅನುಷ್ಠಾನ ಮಾಡಿದ ಹೆಗ್ಗಳಿಕೆ ರಾಜೇಶ್ ನಾೖಕ್ ಅವರದ್ದಾಗಿದೆ. ಜತೆಗೆ ಕೋಮುಗಲಭೆಗಳಿಂದ ತುಂಬಿದ ಬಂಟ್ವಾಳದಲ್ಲಿ ಶಾಂತಿಯ ವಾತಾವರಣ ನಿರ್ಮಿಸಿದ ಕೀರ್ತಿಯೂ ಅವರದ್ದಾಗಿದೆ. ಹೀಗಾಗಿ ಅವರು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಪೂಜಾರಿಯವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ