ಕೊಕ್ಕಡ: ಮಹಿಳೆಯೋರ್ವರ ಮೇಲೆ ಮರದ ರೆಂಬೆ ಬಿದ್ದು ಸಾವು
Team Udayavani, Apr 30, 2023, 6:55 AM IST
ಬೆಳ್ತಂಗಡಿ: ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸಮೀಪದ ಕ್ವಾಟ್ರಸ್ ಎಂಬಲ್ಲಿ ಮನೆ ಎದುರಿನ ಮರದ ರೆಂಬೆ ಕಡಿಯುವ ಸಂದರ್ಭ ಆಕಸ್ಮಿಕವಾಗಿ ತಲೆಗೆ ಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಎ. 28ರಂದು ನಡೆದಿದೆ.
ಕ್ವಾಟ್ರಸ್ ನಿವಾಸಿ ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ ಆಚಾರ್ಯ (56) ಮೃತಪಟ್ಟವರು.
ಮರ ಬಿದ್ದ ತತ್ಕ್ಷಣ ತಲೆಗೆ ತೀವ್ರ ಏಟು ಬಿದ್ದು ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾರೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕಸ್ಮಿಕ ಸಾವು ಎಂದು ಪ್ರಕರಣವನ್ನು ದಾಖಲಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.