ಬೆಳ್ತಂಗಡಿ: ಕ್ಷೇತ್ರ ಪುನರ್‌ ವಿಂಗಡಣೆ

 ತಾಲೂಕು ಪಂಚಾಯತ್‌ನ 5 ಸ್ಥಾನ ಇಳಿಕೆ, ಜಿಲ್ಲಾ ಪಂಚಾಯತ್‌ನ 1 ಸ್ಥಾನ ಏರಿಕೆ

Team Udayavani, Feb 13, 2021, 2:40 AM IST

ಬೆಳ್ತಂಗಡಿ: ಕ್ಷೇತ್ರ ಪುನರ್‌ ವಿಂಗಡಣೆ

ಬೆಳ್ತಂಗಡಿ: ತಾ.ಪಂ., ಹಾಗೂ ಜಿ.ಪಂ. ಚುನಾವಣೆ ಸಮೀಪಿಸುತ್ತಿರುವಂತಯೇ ಕ್ಷೇತ್ರ ಪುನರ್‌ ವಿಂಗಡಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಚುನಾವಣ ಆಯೋಗವು ಆದೇಶ ಹೊರಡಿಸಿದ್ದು, ಫೆ.17ರೊಳಗಾಗಿ ಪುನರ್‌ ವಿಂಗಡಣೆ ಪ್ರಕ್ರಿಯೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಆಯಾಯಾ ತಾಲೂಕುಗಳಿಗೆ ಸೂಚನೆ ಹೊರಡಿಸಿದೆ.

ಅದರಂತೆ ಬೆಳ್ತಂಗಡಿ ತಾಲೂಕಿನಲ್ಲಿ ತಾ.ಪಂ. 21ಹಾಗೂ ಜಿ.ಪಂ. 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಹಿಂದೆ ತಾ.ಪಂ. 26 ಕ್ಷೇತ್ರಗಳಿದ್ದು 21ಕ್ಕೆ ಇಳಿದಿದೆ. 7 ಕ್ಷೇತ್ರಗಳಿದ್ದ ಜಿ.ಪಂ. 8 ಕ್ಷೇತ್ರಕ್ಕೆ ಏರಿಕೆಯಾಗಿದೆ. ಪ್ರತೀ ತಾ.ಪಂ. ಚುನಾವಣ ಶಾಖೆಯಿಂದ ರಾಜ್ಯ ಚುನಾವಣಾ ಆಯೋಗದ ನಿರ್ದೇ ಶನದಂತೆ ತಾ.ಪಂ. ಜಿ.ಪಂ. ವಿಂಗಡಣೆ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ.

ಜನಸಂಖ್ಯೆವಾರು, ಗ್ರಾ.ಪಂ. ವಾರು, ಭೌಗೋಳಿಕವಾರು ವಿಂಗಡಣೆ ಪ್ರಕ್ರಿಯೆ ನಡೆಸಬೇಕಿದೆ. ಈಗಾಗಲೇ ಒಂದು ಗ್ರಾಮ ಪಂಚಾಯತ್‌ ವ್ಯಾಪ್ತಿಗೊಳಪಟ್ಟಂತೆ ಎರಡು ಅಥವಾ ಮೂರು ಗ್ರಾಮಗಳಿದ್ದಲ್ಲಿ ಯಾವುದೇ ಕಾರಣಕ್ಕೂ ಗ್ರಾಮ ಪ್ರತ್ಯೇಕಿಸುವಂತಿಲ್ಲ. ಸಮೀಪದ ಗ್ರಾಮವನ್ನು ಪರಿಗಣಿಸಿ ವಿಂಗಡಿಸಬೇಕಿದೆ.

ತಾ.ಪಂ., ಜಿ.ಪಂ. ಜನಸಂಖ್ಯೆ ಮಿತಿ :

ಹಿಂದೆ ತಾ.ಪಂ. ಕ್ಷೇತ್ರವಾರು ವಿಂಗಡಣೆಗೆ 10 ಸಾವಿರ ಜನಸಂಖ್ಯೆ ಆಧರಿಸಲಾಗಿತ್ತು. ಪ್ರಸಕ್ತ ಬೆಳ್ತಂಗಡಿಯಲ್ಲಿ ತಾ.ಪಂ. ಕ್ಷೇತ್ರ 26ರಿಂದ 21 ಕ್ಷೇತ್ರಗಳಿಗೆ ಇಳಿಕೆಯಾಗಿದ್ದರಿಂದ ಜನಸಂಖ್ಯೆವಾರು ವಿಂಗಡಣೆ ಸಾಮರ್ಥ್ಯ 12,500 ಕ್ಕೆ ಏರಿಸಲಾಗಿದೆ. ಜಿ.ಪಂ. ಕ್ಷೇತ್ರವಾರು ವಿಂಗಡಣೆಗೆ 35,000 ಮಿತಿ ನೀಡಲಾಗಿದೆ ಎಂದು ಚುನಾವಣ ಶಾಖೆಯ ನಾರಾಯಣ ಗೌಡ ತಿಳಿಸಿದ್ದಾರೆ.

ಪ್ರಾಥಮಿಕವಾಗಿ ಕ್ಷೇತ್ರವಾರು ವಿಂಗಡಣೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಫೆ. 17ರೊಳಗಾಗಿ ಜಿಲ್ಲಾಧಿಕಾರಿಗೆ ಒಪ್ಪಿಸಬೇಕಿದೆ. ಬಳಿಕ ಡಿಸಿ ರಾಜ್ಯ ಚುನಾವಣ ಆಯೋಗಕ್ಕೆ ಸಲ್ಲಿಸಿದ ಬಳಿಕ ರಾಜ್ಯ ಸರಕಾರವು ಕರಡು ಪ್ರತಿ ರಚಿಸಿ ಈ ತಿಂಗಳ ಒಳಗಾಗಿ ಸಾರ್ವಜನಿಕರ ಗಮನಕ್ಕೆ ತರುವ ಸಾಧ್ಯತೆ ಇದೆ. ಜೂನ್‌ ತಿಂಗಳಲ್ಲಿ ತಾ.ಪಂ. ಅವಧಿ ಕೊನೆಗೊಳ್ಳಲಿದ್ದು, ಶೀಘ್ರ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಪ್ರಸಕ್ತ ಪ್ರಕ್ರಿಯೆಗಳು ವೇಗ ಪಡೆಯಲಿದೆ.

ಮೇಲ್ದರ್ಜೆಗೆ ಬೇಡಿಕೆ :

ಬೆಳ್ತಂಗಡಿ ತಾಲೂಕಿನಲ್ಲಿ ಬೆಳ್ತಂಗಡಿ ಪ.ಪಂ. ಹೊರತುಪಡಿಸಿ ಅತೀ ಹೆಚ್ಚು 34 ವಾರ್ಡ್‌ ಹಾಗೂ ಜನಸಂಖ್ಯೆ ಆಧಾರವಾಗಿ ನೋಡಿದಲ್ಲಿಯೂ ಉಜಿರೆ ಗ್ರಾ.ಪಂ. ಅತೀ ದೊಡ್ಡ ಗ್ರಾ.ಪಂ. ಆಗಿದೆ. ಉಜಿರೆಯನ್ನು ನಗರ ಸ್ಥಳೀಯ ಸಂಸ್ಥೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಕೂಗು ಕೇಳಿಬಂದಿತ್ತು. ಆದರೂ ಮೇಲ್ದರ್ಜೆಗೇರಿಲ್ಲ. ಈ ಮಧ್ಯೆ ಮತ್ತೆ ತಾ.ಪಂ. 5 ಕ್ಷೇತ್ರಗಳು ಇಳಿಕೆಯಾಗಿದ್ದು, 1 ಜಿ.ಪಂ.ಕ್ಷೇತ್ರ ಏರಿಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಪುನರ್‌ ವಿಂಗಡಣೆ ಪ್ರಕ್ರಿಯೆಯಿಂದಾಗಿ ರಾಜಕೀಯ ಪಕ್ಷಗಳು ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದೆ.

ಬೆಳ್ತ‌ಂಗಡಿ ತಾಲೂಕಿನಲ್ಲಿ ತಾ.ಪಂ. 5 ಕ್ಷೇತ್ರಗಳು ಇಳಿಕೆಯಾಗಿದ್ದು, ಜಿ.ಪಂ. 1 ಕ್ಷೇತ್ರ ಏರಿಕೆಯಾಗಿದೆ. ಪುನರ್‌ ವಿಂಗಡಣೆಗೆ ಬೇಕಾದ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ರಾಜ್ಯ ಸರಕಾರದ ಸೂಚನೆಯಂತೆ ಪ್ರಕ್ರಿಯೆ ನಡೆಸಲಾಗುತ್ತದೆ.ಮಹೇಶ್‌ ಜೆ., ತಹಶೀಲ್ದಾರ್‌

ಟಾಪ್ ನ್ಯೂಸ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

Bantwal ಪಣೋಲಿಬೈಲು: 23 ಸಾವಿರ ಕೋಲ ಸೇವೆಗಳ ಬುಕ್ಕಿಂಗ್‌

Bantwal ಪಣೋಲಿಬೈಲು: 23 ಸಾವಿರ ಕೋಲ ಸೇವೆಗಳ ಬುಕ್ಕಿಂಗ್‌

Missing ಪುತ್ತೂರು ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿದ್ದ ಹೋರಿ ಅಣ್ಣು ನಾಪತ್ತೆ!

Missing ಪುತ್ತೂರು ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿದ್ದ ಹೋರಿ ಅಣ್ಣು ನಾಪತ್ತೆ!

ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ

Dengue Fever; ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.