ನಿಬಿಡ ಶುಭ ಸಮಾರಂಭಗಳು: ಮೆಲ್ಕಾರ್-ಕಲ್ಲಡ್ಕ ಟ್ರಾಫಿಕ್ ಜಾಮ್
Team Udayavani, May 22, 2022, 9:59 PM IST
ಬಂಟ್ವಾಳ: ಸಾಮಾನ್ಯ ವಾಗಿ ರಜಾದಿನವಾದರೆ ಹೆದ್ದಾರಿಗಳ ಸಹಿತ ಬಹುತೇಕ ರಸ್ತೆಗಳು ಖಾಲಿ ಇರುತ್ತವೆ. ಆದರೆ ಮೇ 22ರ ರವಿವಾರ ಶುಭ ಸಮಾರಂಭಗಳು ನಿಬಿಡವಾಗಿದ್ದ ಪರಿಣಾಮ ಎಲ್ಲೆಡೆ ಟ್ರಾಫಿಕ್ ಜಾಮ್ ಕಂಡುಬಂದಿತ್ತು.
ಬಿ.ಸಿ.ರೋಡು- ಅಡ್ಡಹೊಳೆ ರಾ. ಹೆದ್ದಾರಿ ಯನ್ನು ಅಭಿವೃದ್ಧಿಗಾಗಿ ಅಗೆ ಯಲಾಗಿದ್ದು, ರವಿವಾರ ಸಂಜೆಯ ವರೆಗೂ ಟ್ರಾಫಿಕ್ ಜಾಮ್ ಇತ್ತು.
ಮೆಲ್ಕಾರ್ ಜಂಕ್ಷನ್ನಲ್ಲಿ ಮುಡಿಪು ಭಾಗದಿಂದ ಬರುವ ರಸ್ತೆಯೂ ಕೂಡಿಕೊಳ್ಳುತ್ತಿದ್ದು, ಒಂದು ಬದಿ ಹೆದ್ದಾರಿ ಅಗೆದು ಗೊಂದಲಮಯ ಸ್ಥಿತಿ ಇದೆ. ಹೀಗಾಗಿ ವಾಹನಗಳ ಅಡ್ಡಾದಿಡ್ಡಿ ಚಲನೆಯಿಂದ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿತ್ತು.
ಆ್ಯಂಬುಲೆನ್ಸ್ ಕೂಡ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ತೊಂದರೆ ಆಗಿದ್ದು, ಬಳಿಕ ಸಾರ್ವಜನಿಕರೇ ರಸ್ತೆಗಿಳಿದು ವಾಹನಗಳಿಗೆ ಸೂಚನೆ ನೀಡಿ ಸರಾಗ ಸಂಚಾರಕ್ಕೆ ಸಹಕರಿಸಿದರು.
ಗುರುವಾಯನಕೆರೆಯಲ್ಲೂ
ಬೆಳ್ತಂಗಡಿ: ಗುರುವಾಯನಕೆರೆ ಯಲ್ಲಿ ರವಿವಾರ ಮಧ್ಯಾಹ್ನ ವಿಪರೀತ ವಾಹನ ದಟ್ಟಣೆಯಿಂದ ತಾಸುಗಟ್ಟಲೆ ಸಂಚಾರಕ್ಕೆ ಅಡಚಣೆಯಾಯಿತು.
ಬೆಳ್ತಂಗಡಿವರೆಗೂ ವಾಹನಗಳು ಸಾಲುಗಟ್ಟಿದ್ದವು. ಬೆಳ್ತಂಗಡಿಯಂದ ಗುರುವಾಯನ ಕೆರೆಗೆ ತಲುಪಲು ಒಂದು ಗಂಟೆಗೂ ಹೆಚ್ಚು ಸಮಯ ತಗಲುತ್ತಿತ್ತು. ನಿರಂತರ ಮಳೆಯೂ ಸುರಿಯುತ್ತಿದ್ದ ಕಾರಣ ವಾಹನ ಸವಾರರು ಇನ್ನಷ್ಟು ಸಮಸ್ಯೆ ಎದುರಿಸುವಂತಾಯಿತು.
ಗುರುವಾಯನ ಕೆರೆಯಲ್ಲಿ ಆ್ಯಂಬುಲೆನ್ಸ್ ಒಂದು ಟ್ರಾಫಿಕ್ ಜಾಮ್ ನಡುವೆ ಸಿಲುಕಿ ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ