ಮುಂಡಾಜೆ-ಧರ್ಮಸ್ಥಳ ಅರಣ್ಯ ಪ್ರದೇಶ: ಬೆಂಕಿ ನಿಯಂತ್ರಣದಲ್ಲಿ
Team Udayavani, Apr 6, 2023, 5:41 AM IST
ಬೆಳ್ತಂಗಡಿ: ಮುಂಡಾಜೆ- ಧರ್ಮಸ್ಥಳ ಮೀಸಲು ಅರಣ್ಯ ಪ್ರದೇಶದ ನೇರ್ತನೆ, ಇಕ್ಕೆಲ, ಕೋಟಿ ಹಿತ್ತಿಲು, ಮುಂಡ್ರುಪಾಡಿ, ಪಿಲತ್ತಡ್ಕ, ಕೊಂಬಿನಡ್ಕ ಮೊದಲಾದ ಪರಿಸರದಲ್ಲಿ ಕಂಡುಬಂದಿದ್ದ ಬೆಂಕಿ ಬಹುತೇಕ ನಿಯಂತ್ರಣದಲ್ಲಿದೆ ಎಂದು ತಿಳಿದುಬಂದಿದೆ.
ಕಳೆದ ಐದು ದಿನಗಳ ಹಿಂದೆ ಬೆಂಕಿ ಕಂಡುಬಂದಿದ್ದು ಅಲ್ಲಲ್ಲಿ ಬೆಂಕಿ ಹರಡಿತ್ತು. ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತರಲು ಹರ ಸಾಹಸ ನಡೆಸಿದ್ದರು.
ಬೆಂಕಿಯನ್ನು ಆರಿಸುವ ಜತೆಗೆ, ಬೆಂಕಿ ಹರಡದಂತೆ ಬೆಂಕಿ ರೇಖೆ ನಿರ್ಮಿಸಲಾಗಿದೆ. ಇದರಿಂದ ಕಾಡಿನ ಅಲ್ಲಲ್ಲಿ ಸಣ್ಣ ಪ್ರಮಾಣದ ಬೆಂಕಿ ಇದ್ದರೂ ಅದು ಹರಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.