ಪುತ್ತೂರು: ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಮನೆಗೆ ಎನ್.ಐ.ಎ. ದಾಳಿ
Team Udayavani, Sep 22, 2022, 11:23 AM IST
ಪುತ್ತೂರು: ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಅವರ ಸಾಮೆತ್ತಡ್ಕ ಮನೆಗೆ ಎನ್.ಐ.ಎ. ಮತ್ತು ಪುತ್ತೂರು ಪೊಲೀಸರು ದಾಳಿ ಮಾಡಿದ್ದು, ಮನೆಯಲ್ಲಿದ್ದ ಅಬ್ದುಲ್ ಖಾದರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಅವರ ಮನೆಗೆ ದಾಳಿ ಖಂಡಿಸಿ ದರ್ಬೆಯಲ್ಲಿ ಪಿ.ಎಫ್.ಐ ವತಿಯಿಂದ ಪ್ರತಿಭಟನೆ ನಡೆಯಿತು.