ದೇವರ ದರ್ಶನದಿಂದ ಮನಃಶಾಂತಿ: ನಟ ದರ್ಶನ್
Team Udayavani, Jun 29, 2019, 5:00 AM IST
ಸುಬ್ರಹ್ಮಣ್ಯ: ಕುಟುಂಬ ಹಾಗೂ ಸ್ನೇಹಿತರ ಜತೆ ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ. ಕುಕ್ಕೆ ದೇಗುಲಕ್ಕೂ ಈ ಹಿಂದೆ ಅನೇಕ ಬಾರಿ ಬಂದು ದೇವರ ದರ್ಶನ, ಸೇವೆ ನೆರವೇರಿಸಿದ್ದೇನೆ. ಮನಃಶಾಂತಿಗಾಗಿ ದೇವರ ದರ್ಶನ ಪಡೆಯುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶುಕ್ರವಾರ ಆಗಮಿಸಿದ ಅವರು ಶ್ರೀ ದೇವರ ದರ್ಶನ ಪಡೆದರು. ಅನಂತರ ಬೆಂಗಳೂರಿಗೆ ವಾಪಸ್ ಆಗುವ ಮೊದಲು ಕುಮಾರಧಾರಾ ಆದಿತ್ಯ ನೆಸ್ಟ್ ಗೆಸ್ಟ್ ಹೌಸ್ನಲ್ಲಿ ತುಸು ಕಾಲ ವಿಶ್ರಾಂತಿ ಪಡೆದರು. ಈ ವೇಳೆ ಸುದ್ದಿಗಾರ ಜತೆ ಹೆಚ್ಚು ಮಾತನಾಡಲು ಅವರು ನಿರಾಕರಿಸಿದರು.
ಈ ಭಾಗಕ್ಕೆ ಖಾಸಗಿಯಾಗಿ ಬಂದಿದ್ದ ವೇಳೆ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದಿದ್ದೇನೆ. ಕ್ಷೇತ್ರ ತುಂಬ ಅಭಿವೃದ್ಧಿಯಾಗಿದೆ. ಇಲ್ಲಿಗೆ ಭೇಟಿ ನೀಡುವುದರಿಂದ ಸಂತಸವಾಗುತ್ತದೆ.
ಪುತ್ತೂರಿನ ಸ್ನೇಹಿತರೊಬ್ಬರ ಮನೆಯ ಗೃಹ ಪ್ರವೇಶಕ್ಕೆ ಆಗಮಿಸಿದ್ದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲಕ್ಕೆ ಭೆಟಿ ನೀಡಿ ಬಳಿಕ ಕುಕ್ಕೆಗೆ ಆಗಮಿಸಿದ್ದರು.
ದೇವಸ್ಥಾನದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶ, ದೇಗುಲದ ಶಿಷ್ಟಾಚಾರ ವಿಭಾಗದ ಪ್ರಮೋದ್, ನವೀನ್, ಅರ್ಚಕ ಹರೀಶ್ ಭಟ್, ಪ್ರೊಡ್ಯೂಸರ್ಗಳಾದ ಭೋಜ ರೈ, ರಾಮಮೂರ್ತಿ ಮತ್ತು ವೇಣುಗೋಪಾಲ್ ಕೊಟ್ಟಿಗೆಹಾರ, ಚಂದನ್ಕಾಮತ್, ದಿನೇಶ್ ಬಿ.ಎನ್., ಮನೋಜ್, ದಿಲೀಪ್, ಸಂದೀಪ್ ಗೌಡ ಕೊಟ್ಟಿಗೆಹಾರ, ಗೌತಮ್ ಮತ್ತಿತರರು ಉಪಸ್ಥಿತರಿದ್ದರು.
ದರ್ಶನ್ ಈ ಹಿಂದೆ ವಿವಾಹದ ಅನಂತರದಲ್ಲಿ ಕ್ಷೇತ್ರಕ್ಕಾಗಮಿಸಿ ಸರ್ಪ ಸಂಸ್ಕಾರ ಸೇವೆ ಸಲ್ಲಿಸಿದ್ದರು. ಮಗುವೂ ಆಗಿತ್ತು. ಅನಂತರ ದೇಗುಲದಲ್ಲಿ ಗೋಡಂಬಿ ತುಲಾಭಾರ ನಡೆಸಿದ್ದರು. ಕಳೆದ ವರ್ಷ ನಟ ಸೃಜನ್ ಲೊಕೇಶ್ ಜತೆ ಆಗಮಿಸಿದ್ದರು.
ನಟ ದರ್ಶನ್ ಕುಕ್ಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದ ಅವರ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬಿದ್ದರು. ನಟ ದರ್ಶನ್ ದೇವರ ದರ್ಶನ ಪಡೆದ ಕೂಡಲೇ ಕಾರು ಹತ್ತಿ ತೆರಳಿದರು. ಅಭಿಮಾನಿಗಳು ಹಿಂಬಾಲಿಸಿ ತೆರಳಿದರೂ ನಟ ಅವರಿಗೆ ಸಿಗದೆ ಅವರು ನಿರಾಶರಾದರು. ನೂಕುನುಗ್ಗಲು ಉಂಟಾಗಬಹುದಾದ ಸಾಧ್ಯತೆಗಳಿದ್ದ ಕಾರಣಕ್ಕೆ ದರ್ಶನ್ ದೇಗುಲ ಭೇಟಿ ಕಾರ್ಯಕ್ರಮವನ್ನು ಗುಪ್ತವಾಗಿ ಇಡಲಾಗಿತ್ತು.
ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ
ನಟ ದರ್ಶನ್ ಕುಕ್ಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದ ಅವರ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬಿದ್ದರು. ನಟ ದರ್ಶನ್ ದೇವರ ದರ್ಶನ ಪಡೆದ ಕೂಡಲೇ ಕಾರು ಹತ್ತಿ ತೆರಳಿದರು. ಅಭಿಮಾನಿಗಳು ಹಿಂಬಾಲಿಸಿ ತೆರಳಿದರೂ ನಟ ಅವರಿಗೆ ಸಿಗದೆ ಅವರು ನಿರಾಶರಾದರು. ನೂಕುನುಗ್ಗಲು ಉಂಟಾಗಬಹುದಾದ ಸಾಧ್ಯತೆಗಳಿದ್ದ ಕಾರಣಕ್ಕೆ ದರ್ಶನ್ ದೇಗುಲ ಭೇಟಿ ಕಾರ್ಯಕ್ರಮವನ್ನು ಗುಪ್ತವಾಗಿ ಇಡಲಾಗಿತ್ತು.