“ಗುಣಮಟ್ಟದ ಕಾಮಗಾರಿಗೆ ಆದ್ಯತೆ’
5.20 ಕೋ. ರೂ. ವೆಚ್ಚದ ಪರಪ್ಪು-ಆದೂರ್ಪೆರಾಲ್ ರಸ್ತೆಗೆ ಶಿಲಾನ್ಯಾಸ
Team Udayavani, Sep 16, 2020, 8:37 AM IST
ಪರಪ್ಪು-ಆದೂರ್ಪೆರಾಲ್ ರಸ್ತೆ ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.
ಬೆಳ್ತಂಗಡಿ: ಅನೇಕ ವರ್ಷಗಳ ಬೇಡಿಕೆಯ ಪರಪ್ಪು- ಆದೂರ್ಪೆರಾಲ್ ರಸ್ತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಬೇಡಿಕೆಯನ್ನು ಮನ್ನಿಸಿ 5.20 ಕೋ. ರೂ. ಮಂಜೂರು ಮಾಡಿದೆ. ರಸ್ತೆ ಗುಣಮಟ್ಟ ಕಾಪಾಡುವಲ್ಲಿ ಪ್ರಥಮ ಆದ್ಯತೆ ನೀಡಲಾಗಿದ್ದು, ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡದಂತೆ ಗ್ರಾಮಸ್ಥರೇ ಜಾಗೃತೆ ವಹಿಸಬೇಕೆಂದು ಶಾಸಕ ಹರೀಶ್ ಪೂಂಜ ಹೇಳಿದರು.
ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ 5.20 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪರಪ್ಪು³-ಆದೂರ್ ಪೆರಾಲ್ ರಸ್ತೆಗೆ ಸೆ. 14ರಂದು ಶಿಲಾನ್ಯಾಸ ನೆರವೇರಿಸಿ ಶಾಸಕರು ಮಾತನಾಡಿದರು. ತಾಲೂಕಿನ ಅಭಿವೃದ್ಧಿ ನಮ್ಮ ಗುರಿಯಾಗಿದ್ದು, ಸುಮಾರು 600 ಕೋ. ರೂ.ಗಳ ಅನುದಾನವನ್ನು ತಾಲೂಕಿಗೆ ತರುವಲ್ಲಿ ಶ್ರಮಿಸಿದ್ದೇನೆ. ಇದೀಗ ಮತ್ತೆ ಗ್ರಾಮ ಗ್ರಾಮದ ಅಭಿವೃದ್ಧಿ ಕನಸನ್ನು ಕಾಣುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಕೈಕುರೆ, ಗುತ್ತಿಗೆದಾರರಾದ ವಸಂತ ಮಜಲು, ಪ್ರಶಾಂತ್ ಪ್ರತಿಮಾ ನಿಲಯ ಮತ್ತಿತರರು ಉಪಸ್ಥಿತರಿದ್ದರು. ದಾಮೋದರ ಗೌಡ ಬೆರ್ಕೆ ಸ್ವಾಗತಿಸಿದರು. ಶೇಖರ್ ನಾಯ್ಕ ವಂದಿಸಿದರು.
ಮಾದರಿ ಕೆಲಸ
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಮನಸ್ಸಿನಲ್ಲಿ ಅಭಿವೃದ್ಧಿ ಕಲ್ಪನೆ ಇದ್ದರೆ ಯಾವ ರೀತಿ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಶಾಸಕ ಹರೀಶ್ ಪೂಂಜ ಸಾಕ್ಷಿಯಾಗಿದ್ದಾರೆ. ಜನರ ಸೇವೆಗಾಗಿ, ತಾಲೂಕಿನ ಅಭಿವೃದ್ಧಿಗಾಗಿ ಯುವ ಶಾಸಕನಾಗಿ ಮಾಡುತ್ತಿರುವ ಶ್ರಮ ರಾಜ್ಯಕ್ಕೆ ಮಾದರಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು