ಪುತ್ತೂರು ದೇಗುಲದಲ್ಲಿ ಉತ್ಸವ ಆರಂಭ
ದೀಪಾವಳಿ ಪ್ರಯುಕ್ತ ಶ್ರೀ ದೇವರ ಬಲಿ ಉತ್ಸವ, ಬಲೀಂದ್ರ ಪೂಜೆ
Team Udayavani, Nov 15, 2020, 9:14 PM IST
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಉತ್ಸವ ಬಲಿ ನಡೆಯಿತು.
ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ದೇವರ ಬಲಿ ಉತ್ಸವ, ಬಲೀಂದ್ರ ಪೂಜೆ ಇತ್ಯಾದಿಗಳು ನಡೆದವು.
ದೀಪಾವಳಿ ಹಬ್ಬದ ಅಮಾವಾಸ್ಯೆ ದಿನ ದಂದು ಪ್ರತಿವರ್ಷ ದೇವರ ವಾರ್ಷಿಕ ಉತ್ಸವ ಬಲಿ ಆರಂಭವಾಗುವುದು ರೂಢಿ. ಅದರಂತೆ ಮಹಾಪೂಜೆಯ ಬಳಿಕ ಉತ್ಸವ ಬಲಿ ಆರಂಭಗೊಂಡಿತು. ಸಂಜೆ ಮಹಾಪೂಜೆ ವೇಳೆ ಶ್ರೀದೇವರ ನಡೆ ಯಲ್ಲಿ ಅವಲಕ್ಕಿ ಸಮರ್ಪಿಸ ಲಾಯಿತು. ದೇಗುಲದ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಮತ್ತು ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸಂಪ್ರದಾಯದಂತೆ ಆರಂಭದಲ್ಲಿ ಪರವೂರಿನವರಿಗೆ ಅವಲಕ್ಕಿ ಪ್ರಸಾದ ವಿತರಿ ಸಿದರು. ವಸಂತಕಟ್ಟೆಯಲ್ಲಿ ಸೀಮೆಯ ಭಕ್ತರಿಗೆ ಅವಲಕ್ಕಿ, ತೆಂಗಿನ ಕಾಯಿ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.
ಎಲ್ಲ ಉತ್ಸವಗಳಿಗೆ ಚಾಲನೆ
ಶ್ರೀ ಮಹಾಲಿಂಗೇಶ್ವರ ದೇವಾಲ ಯದಲ್ಲಿ ಉತ್ಸವ ಬಲಿ ಹೊರಡುವುದ ರೊಂದಿಗೆ ಸೀಮೆಯ ಎಲ್ಲ ಉತ್ಸವಗಳಿಗೆ ಚಾಲನೆ ದೊರೆಯುತ್ತದೆ. ಇಲ್ಲಿ ಉತ್ಸವ ಆರಂಭವಾದ ಬಳಿಕ ಕಾಲಾವಧಿ, ವರ್ಷಾವಧಿ, ಹರಕೆಯ, ನೇಮ, ಆಯನ, ಕೋಲ, ತಂಬಿಲಾದಿಗಳು ನಡೆಯುತ್ತವೆ.
ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ನಡೆಯದೆ ಯಾವುದೇ ಕಾರಣಕ್ಕೂ ಸೀಮೆಯ ಇತರ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ಜಾತ್ರೆ, ಉತ್ಸವ ನಡೆಯುವುದಿಲ್ಲ. ಇದು ಸೀಮೆಯ ಧಾರ್ಮಿಕ ಸಂಪ್ರದಾಯವಾಗಿದೆ.
ಉಳ್ಳಾಲ್ತಿ ನಡೆ ತೆರೆಯಿತು
ಪತ್ತನಾಜೆಯಂದು ಮುಚ್ಚುವ ಶ್ರೀ ದೇವಾಲಯದ ಗೋಪುರದಲ್ಲಿರುವ ಉಳ್ಳಾಲ್ತಿಯ ನಡೆಯ ಬಾಗಿಲನ್ನು ನ. 14ರಂದು ಸಂಜೆ ಶ್ರೀ ದೇವರು ಬಲಿ ಹೊರಡುವ ಮೊದಲು ತೆರೆದು ಶ್ರೀ ದೇವರ ಉತ್ಸವ ಆರಂಭವಾಗುವ ಕುರಿತು ಬ್ರಹ್ಮವಾಹಕರು ನಡೆಯಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವರ ಬಲಿ ಉತ್ಸವ ಆರಂಭಗೊಂಡು ಧ್ವಜಸ್ತಂಭದ ಬಳಿ ಹಾಕಲಾಗಿದ್ದ ಬಲೀಂದ್ರ ಮರಕ್ಕೆ ಪೂಜೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ