ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಧ್ಯಾತ್ಮಿಕ ಚಿಂತಕಿ ಸಾಧ್ವಿ ಭಗವತಿ ಸರಸ್ವತಿ ಭೇಟಿ
Team Udayavani, Feb 19, 2023, 10:41 PM IST
ಬೆಳ್ತಂಗಡಿ: ಹಿಂದು ಫೈರ್ ಬ್ರಾಂಡ್ ಮಧ್ಯಪ್ರದೇಶದ ಆಧ್ಯಾತ್ಮಿಕ ಚಿಂತಕಿ ಸಾಧ್ವಿ ಭಗವತಿ ಸರಸ್ವತಿ ರವಿವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸನ್ನಿಧಿ ಹಾಗೂ ಬ್ರಹ್ಮಕಲಶೋತ್ಸವ ನೆರವೇರುತ್ಯಿರುವ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು ತುಳು ನಾಡುದ ಮಾತ ಬಂಧುಲೆಗ್ ಯನ್ನ ಸೊಲ್ಮೆಲು ಎಂದ ಹೇಳಿ ತುಳುನಾಡ ಕೋಟಿ ಚೆನ್ನಯ, ನಾರಾಯಣ ಗುರು, ಕಟೀಲು ದುರ್ಗಾಪರಮೇಶ್ವರಿ, ಕಲ್ಕುಡ, ಕಲ್ಲುರ್ಟಿ, ಪರಷುರಾಮನಿಗೆ ವಂದಿಸಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಈ ಭೂಮಿಗೆ ಬಂದು ನೋಡಿದಾಗ ರಾಷ್ಟ್ರಕ್ಕಾಗಿ ನನ್ನ ಸೇವೆ ಸಾರ್ಥಕವಾಗಿದೆ ಎಂದನಿಸಿದೆ ಎಂದರು.
ದೇಶದ ರಕ್ಷಣೆಯಾಗಬೇಕಾದರೆ ಹಿಂದು ಧರ್ಮದ ರಕ್ಷಣೆಯಾಗಬೇಕು. ಇಂದು ಹಿಂದುಗಳ ಮೇಲೆ ಲವ್ ಜಿಹಾದ್, ಸಿನೆಮಾ ಜಿಹಾದ್, ಭಾಷಾ ಜಿಹಾದ್ ನಡೆಯುತ್ತಿದೆ. ಪ್ರವೀಣ್ ನೆಟ್ಟಾರ್ ಸಹಿತ ಅನೇಕ ಹಿಂದು ಮುಖಂಡರ ಹತ್ಯೆಯಾಗುತ್ತಿದೆ. ಪ್ರವೀಣ್ ನೆಟ್ಟಾರ್ ಹತ್ಯೆಯಾದವರಿಗೆ ಎಸ್.ಡಿ.ಪಿ.ಐ. ಚುನಾವಣಾ ಟಿಕೇಟ್ ನೀಡುತ್ತಿದೆ ಎಂದಾದರೆ ರಾಮರಾಜ್ಯ ನಿರ್ಮಾಣ ಸಾಧ್ಯ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ತೆಕ್ಕಟ್ಟೆ: ಅನಾರೋಗ್ಯದಿಂದ ಬಾಣಂತಿ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!