Bantwal ಬಸ್ಸಿಗೆ ಹಿಂಬದಿಯಿಂದ ಸ್ಕೂಟರ್ ಢಿಕ್ಕಿ; ಗಾಯ
Team Udayavani, Apr 14, 2024, 12:26 AM IST
ಬಂಟ್ವಾಳ: ರಾ.ಹೆ. 75ರ ತುಂಬೆಯ ಕಡೆಗೋಳಿಯಲ್ಲಿ ಕೆಎಸ್ಆರ್ಟಿಸಿ ಬಸ್ಸಿಗೆ ಹಿಂಬದಿಯಿಂದ ಸ್ಕೂಟರ್ ಢಿಕ್ಕಿಯಾಗಿ ತ್ರಿಬಲ್ ರೈಡ್ ಮಾಡುತ್ತಿದ್ದ ಮೂವರು ಸವಾರರು ಗಾಯಗೊಂಡ ಘಟನೆ ಎ. 12ರಂದು ನಡೆದಿದೆ.
ರಮೀಝ್, ಸಮೀಮ್ ಹಾಗೂ ಸೋಯಿಕ್ ಗಾಯಗೊಂಡವರು. ಅವರು ಹೆಲ್ಮೆಟ್ ಕೂಡ ಧರಿಸದೆ ಸ್ಕೂಟರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.