Shamboor: ನೀರಿಗೆ ಬಿದ್ದು ಯುವಕ ಸಾವು ಸಾವಿನ ಕುರಿತು ಸಂಶಯ; ಪೊಲೀಸ್ ತನಿಖೆ
Team Udayavani, Mar 20, 2024, 12:45 AM IST
ಬಂಟ್ವಾಳ: ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಮಾ. 18ರ ಸಂಜೆ ನೇತ್ರಾವತಿ ನದಿ ನೀರಿಗೆ ಬಿದ್ದು ಬೆಳ್ತಂಗಡಿ ಮೂಲದ ಯುವಕನೋರ್ವ ಮೃತಪಟ್ಟಿರುವ ಕುರಿತು ಹಲವು ಸಂಶಯಗಳು ಹುಟ್ಟಿಕೊಂಡಿದ್ದು, ಮೃತರ ಸಂಬಂಧಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಶ್ವ (30) ಅವರು ಕಾರಿನಲ್ಲಿ ನಾಲ್ವರು ಸ್ನೇಹಿತರ ಜತೆ ಶಂಭೂರಿನ ನೇತ್ರಾವತಿ ನದಿ ತೀರಕ್ಕೆ ಆಗಮಿಸಿದ್ದರು. ಈ ವೇಳೆ ಲೋಹಿತಾಶ್ವ ಅವರ ಮೃತದೇಹ ನೀರಿನಲ್ಲಿ ಪತ್ತೆಯಾಗಿದ್ದು, ಅದರ ದೇಹದಲ್ಲಿ ಬಟ್ಟೆ, ಕೈಯಲ್ಲಿ ವಾಚ್ ಇದ್ದ ಕಾರಣ ಅವರು ಸ್ನಾನಕ್ಕೆಂದು ನದಿಗೆ ಇಳಿದಿರಲಿಕ್ಕಿಲ್ಲ. ಹಾಗಾದರೆ ಅವರು ಯಾವ ರೀತಿ ಮೃತಪಟ್ಟಿದ್ದಾರೆ ಎಂಬ ಸಂಶಯಗಳು ಹುಟ್ಟಿಕೊಂಡಿತ್ತು.
ಘಟನೆಯ ಕುರಿತು ಲೋಹಿತಾಶ್ವ ಅವರ ಪತ್ನಿಯ ತಮ್ಮ ಕಳಿಯ ಗ್ರಾಮ ನಿವಾಸಿ ಸಂದೀಪ್ ಪೊಲೀಸರಿಗೆ ದೂರು ನೀಡಿದ್ದು, ಭಾವನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಸಾವಿನ ನೈಜ ಕಾರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.