Tragedy: ಜೆಜೆಎಂ ಟ್ಯಾಂಕ್ ಮೇಲಿಂದ ಬಿದ್ದು ಸೈಟ್ ಸೂಪರ್ವೈಸರ್ ಮೃತ್ಯು
Team Udayavani, Mar 29, 2024, 10:30 PM IST
ಪುತ್ತೂರು: ಜಲಜೀವನ್ ಮಿಷನ್ ಅಡಿಯಲ್ಲಿ ಆರ್ಯಾಪು ಗ್ರಾಮದ ಬಂಗಾರಡ್ಕದಲ್ಲಿ ನಿರ್ಮಾಣಗೊಂಡ ನೀರಿನ ಟ್ಯಾಂಕ್ ಮೇಲಿಂದ ಬಿದ್ದು ಸೈಟ್ ಸೂಪರ್ವೈಸರ್ ಪಾಲಾಕ್ಷ (31) ಮೃತಪಟ್ಟ ಘಟನೆ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಂಚಿಕೊಪ್ಪ ಗ್ರಾಮದ ಹುಚ್ಚಪ್ಪ ಅವರ ಪುತ್ರ ಪಾಲಾಕ್ಷ ಬಂಗಾರಡ್ಕದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ನಿರ್ಮಾಣಗೊಂಡ ನೀರಿನ ಟ್ಯಾಂಕ್ ಮೇಲೆ ಹತ್ತಿ ವೀಕ್ಷಣೆ ಮಾಡುವಾಗ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತತ್ಕ್ಷಣ ಅಲ್ಲೇ ಇದ್ದ ಧನರಾಜ್ ಅವರು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅದಾಗಲೇ ಗಾಯಾಳು ಮೃತಪಟ್ಟಿದ್ದರು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.