ಸುಳ್ಯದ ರೈತ ಹೋರಾಟ: ಸ್ಮಾರಕ ನಿರೀಕ್ಷೆ


Team Udayavani, Mar 26, 2021, 4:30 AM IST

Untitled-1

ಸುಳ್ಯ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಲವು ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಹೇಳಿದೆ. ಈ  ಹಿನ್ನೆಲೆಯಲ್ಲಿ ಕರ್ನಾಟಕದಿಂದ ಆಯ್ಕೆಯಾದ 3 ತಾಣಗಳಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆಯ ಬಂಗ್ಲೆಗುಡ್ಡೆಯೂ ಒಂದು.

ಬಂಗ್ಲೆಗುಡ್ಡೆಯಲ್ಲಿ ಇಕ್ಕೇರಿ ಅರಸರು ಕಟ್ಟಿಸಿದ ಕೋಟೆ ಮತ್ತು ಅದರ ಸುತ್ತಲಿನ ಕಂದಕಗಳ ಕರುಹಗಳು ಇನ್ನೂ ಇವೆ. 1837ರಲ್ಲಿ ಬೆಳ್ಳಾರೆಯು ಸುಳ್ಯ, ಅಮರ ಪಂಜ ಮತ್ತು ಮಾಗಣೆ ಪ್ರದೇಶಗಳ ರಾಜ ಧಾನಿಯಾಗಿತ್ತು. ಇಲ್ಲಿ 1804ರಲ್ಲಿ ಬ್ರಿಟಿಷರ ಖಜಾನೆ ಕಚೇರಿ ಆರಂಭವಾಗಿತ್ತು. ಆ ಕಟ್ಟಡವು ಇನ್ನೂ ಇದ್ದು 2015ರ ವರೆಗೂ ಬೆಳ್ಳಾರೆ ಗ್ರಾ.ಪಂ.ನ ಲೆಕ್ಕಾಧಿಕಾರಿಗಳ ಕಚೇರಿಯಾಗಿತ್ತು. ಅಧಿಕಾರಿಗಳು ತಂಗುತ್ತಿದ್ದ ಇನ್ನೊಂದು ಕಟ್ಟಡವೂ ಅಲ್ಲೇ ಪಕ್ಕದಲ್ಲಿದೆ.

ಹಿನ್ನೆಲೆ :

1837ರ ಮಾ. 30ರಂದು ಸುಳ್ಯದ ಪೂಮಲೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ರೈತರು ಸಂಘಟಿತರಾಗಿ ಬೆಳ್ಳಾರೆ ಖಜಾನೆಯನ್ನು ಮುತ್ತಿಗೆ ಹಾಕಿದ್ದರು. ಅಲ್ಲಿನ ಕಲೆಕ್ಟರ್‌, ಜತೆಯಿದ್ದ ಇಬ್ಬರು ಮಂಗಳೂರಿಗೆ ಪಲಾಯನ ಮಾಡಿದರು. ಹೀಗೆ ಹಲವು ತಂಡಗಳು ಸೇರಿ ವಿಟ್ಲದವರೆಗಿನ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡಿತು.

1837ರ ಎ. 5ರಂದು ಮಂಗಳೂರಿನ ಬಾವುಟಗುಡ್ಡೆಗೆ ತೆರಳಿ ಬ್ರಿಟಿಷ್‌ ಧ್ವಜ ಕೆಳಗಿಳಿಸಿ ಕೊಡಗಿನ ರಾಜ ಧ್ವಜವನ್ನು ಹಾರಿಸಿ ವಿಜಯೋತ್ಸವ ಆಚರಿಸಲಾಯಿತು. 1834ರಲ್ಲಿ ಕೊಡಗಿನ ಚಿಕ್ಕವೀರ ರಾಜೇಂದ್ರ ಅವರನ್ನು ಪದಚ್ಯುತಿಗೊಳಿಸಿ ಸುಳ್ಯ, ಪುತ್ತೂರುಗಳನ್ನು ಬೇರ್ಪಡಿಸಿದ್ದಕ್ಕಾಗಿ ಹಾಗೂ ನಗದು ರೂಪದ ಕಂದಾಯ ನೀಡಲು ಒತ್ತಾಯಿಸದ್ದರಿಂದ, ಕೃಷಿ ಉತ್ಪನ್ನಕ್ಕೆ ಸರಿಯಾದ ಬೆಲೆ ಇಲ್ಲದ್ದರಿಂದ ರೈತರು 1837ರಲ್ಲಿ ದಂಗೆ ಎದ್ದರು. ದಂಗೆಯನ್ನು ಮಟ್ಟ ಹಾಕಲು ತಲಶ್ಶ ರಿ ಮತ್ತು ಮುಂಬಯಿಯಿಂದ ಬ್ರಿಟಿಷರ ದಂಡು ಬಂದು ರೈತರನ್ನು ಮಟ್ಟ ಹಾಕಿತು. ದಂಗೆಯ ಪ್ರಮುಖರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು ಎನ್ನುತ್ತದೆ ಇತಿಹಾಸ.

ಸುಳ್ಯದ ಈ ಕೆಚ್ಚೆದೆಯ ಹೋರಾಟದ ನೆನಪಿಗಾಗಿ ಯಾವುದೇ ಕುರುಹುಗಳಿಲ್ಲ. ಈ ಪ್ರದೇಶದಲ್ಲಿ ಒಂದು ಗ್ರಂಥಾಲಯ, ಸ್ಮಾರಕ ಹಾಗೂ ಆ ಕೋಟೆ ಮತ್ತು ಕಟ್ಟಡವನ್ನು ಸಂರಕ್ಷಿಸುವ ಕಾರ್ಯವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆ. ಬೆಳ್ಳಾರೆ ಲೆಕ್ಕಾಧಿಕಾರಿಗಳ ಕಚೇರಿ ಸ್ಥಳಾಂತರವಾದ ಬಳಿಕ ಆ ಪ್ರದೇಶ ಹಾಗೇಯೇ ಇದೆ. ಸದ್ಯ ಕೇಂದ್ರ ಸರಕಾರವೂ ಇದನ್ನು ಐತಿಹಾಸಿಕ ತಾಣವೆಂದು ಗುರುತಿಸಿದ್ದು ಅಲ್ಲಿಂದಲೂ ಅನುದಾನ ತರಿಸಿಕೊಳ್ಳುವ ಅವಕಾಶವಿದೆ. ಈ ಮೊದಲು ಹಲವು ಬಾರಿ ಬೆಳ್ಳಾರೆಯಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕೆಂದು ಹಲವು ಹೋರಾಟಗಳು ನಡೆದಿದ್ದರೂ ಅದಕ್ಕೆ ಭರವಸೆಯ ಪ್ರತಿಕ್ರಿಯೆ ಮಾತ್ರ ದೊರೆತಿದೆ.

ಮಾ. 27ರಂದು ಅಮರ ಸುಳ್ಯ ಕ್ರಾಂತಿಯ ಸವಿ ನೆನಪಿನ ಕಾರ್ಯಕ್ರಮದಲ್ಲಿ ಸಚಿವ ಎಸ್‌.ಅಂಗಾರ, ಕೋಟ ಶೀÅನಿವಾಸ ಪೂಜಾರಿ, ಜಿಲ್ಲಾಧಿಕಾರಿ ಭಾಗವಹಿಸಲಿದ್ದು, ಅಂದೇ ಸ್ಮಾರಕ ಸ್ಥಾಪನೆಯ ಕೈಂಕರ್ಯ ಆರಂಭವಾಗಿ ಗುದ್ದಲಿ ಪೂಜೆ ನಡೆಯಲಿ ಎಂಬುದು ಸಾರ್ವಜನಿಕರ ಅಭಿಲಾಷೆ.

ರೈತ ಹೋರಾಟ ಎಂಬುದು ಸುಳ್ಯದ ಸ್ವಾತಂತ್ರ್ಯ ಹೋರಾಟದ ಕುರುಹು. ಅದು ನಮ್ಮ ಹೆಮ್ಮೆ. ಆ ಪ್ರಯುಕ್ತ ಸ್ಮಾರಕ ಹಾಗೂ ಗ್ರಂಥಾಲಯ ನಿರ್ಮಾಣ ಮಾಡುವ ಉದ್ದೇಶವಿದೆ. ಶೀಘ್ರವೇ ಈ ಬಗ್ಗೆ ಅನುದಾನ ತರಿಸಿ ಸ್ಮಾರಕ ನಿರ್ಮಾಣದ ಕಾಮಗಾರಿ ಆರಂಭಿಸಲು ಪ್ರಯತ್ನಿಸಲಾಗುವುದು.  –ಎಸ್‌.ಅಂಗಾರ, ಸಚಿವರು

 ಈವರೆಗೆ ಸ್ಮಾರಕ ನಿರ್ಮಾಣ ಕೇವಲ ಭರವಸೆಗೆ ಸೀಮಿತವಾಗಿದೆ. ಈ ಬಾರಿ ಕೇಂದ್ರ ಸರಕಾರದ ಸಹಕಾರ, ಸಚಿವ ಎಸ್‌. ಅಂಗಾರ ಅವರ ಪ್ರಯತ್ನದಿಂದ ಅನುದಾನ ದೊರೆತರೆ ಶೀಘ್ರ ಸ್ಮಾರಕ ನಿರ್ಮಾಣವಾಗಲಿದೆ. ಆ ಮೂಲಕ ರೈತರಿಗೆ ಗೌರವ ಸಲ್ಲಿಸಬೇಕಾಗಿದೆ. ಡಾ| ಪ್ರಭಾಕರ ಶಿಶಿಲ, ಸಾಹಿತಿ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.