ಮಲಿನಗೊಳ್ಳುತ್ತಿದೆ ನೇತ್ರಾವತಿ ನದಿ


Team Udayavani, May 14, 2019, 5:23 AM IST

33

ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿ. ಕುಕ್ಕೆಯಿಂದ ಹರಿದುಬರುವ ಕುಮಾರಧಾರಾ, ಧರ್ಮಸ್ಥಳದಿಂದ ಹರಿದು ಬರುವ ನೇತ್ರಾವತಿ ಇವೆರಡೂ ನದಿಗಳು ಸಂಗಮವಾಗುವ ಸ್ಥಳ ಉಪ್ಪಿನಂಗಡಿ.

ಇಲ್ಲಿನ ಸಹಸ್ರಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲೇ ಹರಿದು ಹೋಗುವ ನೇತ್ರಾವತಿ ನದಿಯಲ್ಲಿ ಮಿಂದೆದ್ದರೆ ಕಾಶಿಯಲ್ಲಿ ಮಿಂದ ಫ‌ಲವಿದೆ ಮತ್ತು ಗಯಾಪದ ಕ್ಷೇತ್ರ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪಿಂಡಪ್ರದಾನ ಮಾಡಿದರೆ ಪಿತೃಗಳಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಬಲವಾದ ಭಾವನಾತ್ಮಕ ನಂಬಿಕೆಯಿದೆ.

ಆದರೆ ಇದೀಗ ಕೂಟೇಲು ಸೇತುವೆ ಬಳಿಯಿಂದ ಉಪ್ಪಿನಂಗಡಿ ದೇಗುಲ ತನಕ ನೇತ್ರಾವತಿ ನದಿಯ ದಡವು ಕಸ, ಕಡ್ಡಿ, ಪ್ಲಾಸ್ಟಿಕ್‌, ಕೋಳಿ ತ್ಯಾಜ್ಯ, ಕಲುಷಿತ ನೀರಿನಿಂದ ಸಂಪೂರ್ಣ ಮಲಿನಗೊಳ್ಳುತ್ತಿದೆ. ಉಪ್ಪಿನಂಗಡಿ ಪಟ್ಟಣದ ಹೃದಯ ಭಾಗದಲ್ಲೇ ಹರಿದು ಹೋಗುವ ನದಿಯ ತಟಕ್ಕೆ ದಿನ ನಿತ್ಯ ರಾಶಿ ರಾಶಿ ತ್ಯಾಜ್ಯಗಳು ಬೀಳುತ್ತಿವೆ. ದೇಶವ್ಯಾಪಿ ಸ್ವಚ್ಛತೆಗಾಗಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿದ್ದು, ಈ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಇಂತಹ ಪವಿತ್ರ ನದಿಗಳ ಸ್ವಚ್ಛತೆಯ ಅಗತ್ಯವಿದೆ. ನದಿಯಲ್ಲಿ ಕಸ ಚೆಲ್ಲುತ್ತಿರುವ ಬೆಳವಣಿಗೆ ಉಪ್ಪಿನಂಗಡಿ ನಗರಕ್ಕೆ ಕಪ್ಪು ಚುಕ್ಕೆಯೂ ಹೌದು. ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಗಳು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

– ಆದರ್ಶ್‌ ಶೆಟ್ಟಿ ಉಪ್ಪಿನಂಗಡಿ

ಬೋರುಗುಡ್ಡೆ: ವಿದ್ಯುತ್‌ ಕಂಬ ಗಟ್ಟಿಗೊಳಿಸಿ
ಇದು ಸುಳ್ಯ ನಾವೂರು ಬೋರುಗುಡ್ಡೆ ಎಂಬಲ್ಲಿಯ ದೃಶ್ಯ. ಎರಡು ತಿಂಗಳ ಹಿಂದೆ ಮೆಸ್ಕಾಂ ವತಿಯಿಂದ ಹಳೆ ವಿದ್ಯುತ್‌ ಕಂಬಗಳನ್ನು ಬದಲಿಸಿ, ಹೊಸ ಕಂಬಗಳನ್ನು ಅಳವಡಿಸುವ ಕಾರ್ಯವನ್ನು ಮೆಸ್ಕಾಂ ಗುತ್ತಿಗೆದಾರರು ಮಾಡಿದ್ದರು.

ಆದರೆ ಅವರು ಅನುಸರಿಸಿದ ಕ್ರಮ ತೀರಾ ಅವೈಜ್ಞಾನಿಕವಾಗಿದೆ. ಕಂಬಗಳ ಬುಡವನ್ನು ಗಟ್ಟಿಗೊಳಿಸದೆ ನಿರ್ಲಕ್ಷ್ಯ ತಾಳಿದ್ದಾರೆ. ಈ ಕಂಬ ಇಂತಹ ಬೇಜವಾಬ್ದಾರಿಗೆ ಒಂದು ಉದಾಹರಣೆ. ಇದು ಜಿ.ಎಂ. ಅಹಮದ್‌ ಮನೆಯ ದಾರಿ ಬದಿಯಲ್ಲಿದೆ. ಕಂಬ ಊರಲು ಒಂದುವರೆ ಅಡಿಯ ಗುಂಡಿ ತೋಡಿದ್ದಾರೆ. ಕಂಬ ನೆಟ್ಟಿದ್ದಾರೆ. ತಂತಿಗಳನ್ನು ಅಳವಡಿಸಿದ್ದು, ಅದರಲ್ಲಿ ವಿದ್ಯುತ್‌ ಹರಿಯುತ್ತಿದೆ. ಆದರೆ, ಕಲ್ಲು ಅಥವಾ ಮಣ್ಣು ಹಾಕಿ ಕಂಬದ ಬುಡವನ್ನು ಗಟ್ಟಿಗೊಳಿಸಿಲ್ಲ. ಇತ್ತೀಚೆಗೆ ಬಂದ ಮಳೆಯಿಂದ ಕಂಬದ ಬುಡದ ಮಣ್ಣು ಜಾರುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದರಿಂದ ಭೀತಿಗೊಂಡಿರುವ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ, ಅವರು ಗುತ್ತಿಗೆದಾರರ ಸಂಖ್ಯೆಯನ್ನು ಕೊಟ್ಟಿದ್ದಾರೆ. ಗುತ್ತಿಗೆದಾರರಿಗೆ ಕರೆ ಮಾಡಿದರೆ ‘ನೀವೇ ಸ್ವಲ್ಪ ಕಲ್ಲು, ಮಣ್ಣು ಹಾಕಿಬಿಡಿ’ ಎಂಬ ಉಡಾಫೆಯ ಉಚಿತ ಸಲಹೆ ಬಂತು. ಕಂಬ ಹಾಗೆಯೇ ಇದೆ. ಇನ್ನು ಬರುವುದು ಮಳೆಗಾಲ. ಎತ್ತರದ ಪ್ರದೇಶ, ನೀರಿನ ಹರಿವು ಜೋರಾಗಿರುತ್ತದೆ. ಗಾಳಿಯ ರಭಸ ಕೂಡಾ ಕಡಿಮೆಯೇನಲ್ಲ…ಬುಡದಿಂದ ಮಣ್ಣು ಜಾರಿ ನೀರಿನ ಸೆಳೆತಕ್ಕೆ ಗಾಳಿಯ ರಭಸಕ್ಕೆ ವಿದ್ಯುತ್‌ ಕಂಬ ಜಾರಿ ಅಡ್ಡಬಿದ್ದರೆ ಅನಾಹುತಗಳು ಸಂಭವಿಸುವುದು ಖಂಡಿತ. ಮೆಸ್ಕಾಂ ಅಧಿಕಾರಿಗಳು ಅನಾಹುತಕ್ಕಾಗಿ ಕಾಯುತಿದ್ದಾರೆಯೇ?

– ಎನ್‌.ಎ. ಅಬ್ದುಲ್ಲ, ನಾವೂರು- ಸುಳ್ಯ

ಟಾಪ್ ನ್ಯೂಸ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.