Belthangady ನೇತ್ರಾವತಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ
Team Udayavani, Feb 13, 2024, 11:11 PM IST
ಬೆಳ್ತಂಗಡಿ: ಕಲ್ಮಂಜ ಗ್ರಾಮದ ಪಜಿರಡ್ಕ ಸಮೀಪ ನದಿಯಲ್ಲಿ ಅಂದಾಜು 35-40ವರ್ಷದ ವ್ಯಕ್ತಿಯ ಅಪರಿಚಿತ ಶವ ಪತ್ತೆಯಾಗಿದೆ.
ಪೊಲೀಸ್ ಅಧಿಕಾರಿಗಳ ಮಾಹಿತಿ ಮೇರೆಗೆ ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕದವರು ಶವ ಮೇಲೆತ್ತುವ ಕಾರ್ಯಾಚರಣೆಗೆ ನೆರವಾದರು.
ಸ್ಥಳಕ್ಕೆ ತೆರಳಿ ಉಜಿರೆ- ಬೆಳಾಲು ಶೌರ್ಯ ಘಟಕದ ಸ್ವಯಂ ಸೇವಕರು ಶವವನ್ನು ಮೇಲಕ್ಕೆತ್ತಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಮುಂದಿನ ಕಾನೂನು ಪ್ರಕ್ರಿಯೆಗೆ ಕಳಿಸಿಕೊಡಲಾಯಿತು.
ಧರ್ಮಸ್ಥಳ ಠಾಣೆಯ ಎಸ್ಐ ಸಮರ್ಥ್ ಹಾಗೂ ಪೊಲೀಸರ ತಂಡ ಹಾಜರಿದ್ದು, ಮಹಜರು ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿದರು.