Vitla ಚಾಲಕನ ಅಜಾಗರೂಕತೆಯಿಂದ ಬೈಕ್’ಗೆ ಢಿಕ್ಕಿ ಹೊಡೆದ ಕಾರು; ಇಬ್ಬರಿಗೆ ಗಾಯ
Team Udayavani, Oct 25, 2023, 11:15 PM IST
ವಿಟ್ಲ: ಇಡ್ಕಿದು ಗ್ರಾಮದ ಉರಿಮಜಲು ಎಂಬಲ್ಲಿ ಕಾರು ಚಾಲಕ ಅಜಾಗರೂಕತೆಯಿಂದ ಚಲಾಯಿಸಿ, ಬೈಕ್ಗೆ ಢಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡಿದ್ದಾರೆ.
ಪೆರುವಾಯಿ ಗ್ರಾಮದ ಬಂಟ್ವಾಳ ನಿವಾಸಿಯಾದ ಫ್ರಾನ್ಸಿಸ್ ಡಿ’ಸೋಜಾ (56) ಮತ್ತು ಹೆನ್ರಿ ಫೆರಾವೋ ಗಾಯಗೊಂಡವರು.
ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.