ನಂಚಾರು: ಜಾನುವಾರು ಸಾಗಾಟ; ಆರೋಪಿಗಳು ಪರಾರಿ
Team Udayavani, Mar 31, 2019, 12:41 PM IST
ಕೋಟ: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಕೋಟ ಪೊಲೀಸರು ಶನಿವಾರ ಬೆಳಗಿನ ಜಾವ ನಂಚಾರು ಗ್ರಾಮದ ಕೊಳ್ಕೆಬೈಲಿನಲ್ಲಿ ವಶಪಡಿಸಿಕೊಂಡು 11 ಜಾನುವಾರುಗಳನ್ನು ರಕ್ಷಿಸಿದ್ದಾರೆ. ವಾಹನದಲ್ಲಿದ್ದ ಮೂರು ಜಾನುವಾರುಗಳು ಸಾವಿಗೀಡಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಉಪನಿರೀಕ್ಷಕ ರಫೀಕ್ ಎಂ. ಅವರು ಸಿಬಂದಿ ಜತೆಯಲ್ಲಿ ಕೊಳ್ಕೆಬೈಲು ಜಂಕ್ಷನ್ ಬಳಿ ಅನುಮಾನದ ಮೇರೆಗೆ ಬೈಕ್ ಹಾಗೂ ಬೊಲೆರೋ ಪಿಕ್ಅಪ್ ವಾಹನವನ್ನು ತಡೆದರು. ಕೂಡಲೇ ಅದರ ಚಾಲಕರು ವಾಹನವನ್ನು ಚಾಲನೆ ಸ್ಥಿತಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪರಿಣಾಮ ಪಿಕಪ್ ವಾಹನ ಚರಂಡಿಗೆ ಬಿದ್ದಿದ್ದು, ಅದನ್ನು ಪರಿಶೀಲಿಸಿದಾಗ ಅಕ್ರಮ ಪತ್ತೆಯಾಗಿದೆ.
ಕ್ರೌರ್ಯಕ್ಕೆ ಸಾಕ್ಷಿ ಜಾನುವಾರುಗಳ ಸಾವು
ಚರಂಡಿಗೆ ಬಿದ್ದ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ಹೆಣ್ಣು ಕರು, ಎರಡು ಗಂಡು ಕರು ಸಹಿತ ಮೂರು ಜಾನುವಾರುಗಳು ಮೃತಪಟ್ಟಿದ್ದು, 3 ದನ, 6 ಗಂಡು ಕರು ಮತ್ತು 2 ಹೆಣ್ಣು ಕರುಗಳ ಸಹಿತ 11 ಜಾನುವಾರುಗಳು ಜೀವಂತವಾಗಿ ಪತ್ತೆಯಾಗಿದೆ. ಅನಂತರ ಅವುಗಳನ್ನು ರಕ್ಷಿಸಿ ಠಾಣೆಗೆ ತರಲಾಯಿತು.
ಕಳವು ಶಂಕೆ
ಒಂದು ದನದ ಕಿವಿಯಲ್ಲಿ ಟಿಕ್ಕಿ ಇದೆ. ಹೀಗಾಗಿ ಜಾನುವಾರುಗಳನ್ನು ಕದ್ದು ತಂದಿರಬಹುದು ಎನ್ನಲಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ