ಗೊಂದಲದ ಗೂಡು ಮಣಿಪಾಲ ಟ್ರಾಫಿಕ್‌ ಸಿಗ್ನಲ್


Team Udayavani, Mar 25, 2022, 12:15 PM IST

manipal

ಉಡುಪಿ: ನಗರಾದ್ಯಂತ ಟ್ರಾಫಿಕ್‌ ದಟ್ಟಣೆಗೆ ಸಿಗ್ನಲ್‌ ಲೈಟ್‌ ಇಲ್ಲದಿರುವುದು ಹಾಗೂ ಸೂಕ್ತ ಸ್ಥಳಾವಕಾಶದ ಕೊರತೆ ಕಾರಣವಾದರೆ ಮಣಿಪಾಲದ ಟ್ರಾಫಿಕ್‌ ಸಮಸ್ಯೆ ಅದಕ್ಕಿಂತಲೂ ಭಿನ್ನವಾಗಿದೆ. ಇಲ್ಲಿ ವಿಶಾಲ ಸ್ಥಳಾವಕಾಶವಿದ್ದರೂ ಸಿಗ್ನಲ್‌ಗೆ ಬೇಕಿರುವ ಸೌಲಭ್ಯಗಳಿಲ್ಲದ ಕಾರಣ ಸವಾರರು ವಿನಾಕಾರಣ ಟ್ರಾಫಿಕ್‌ನಲ್ಲಿ ನಿಲ್ಲುವ ಅನಿವಾರ್ಯ ಎದುರಾಗುತ್ತಿದೆ.

ಈ ಹಿಂದೆ ಟೈಗರ್‌ ಸರ್ಕಲ್‌ ವೃತ್ತವಿದ್ದ ಪ್ರದೇಶವನ್ನು ಹೆದ್ದಾರಿ ವಿಸ್ತರಣೆ ಕಾರಣಕ್ಕೆ ತೆಗೆಯಲಾಗಿತ್ತು. ಅನಂತರ ಇಲ್ಲಿ ವಿಸ್ತರಣೆ ಕಾಮಗಾರಿ ನಡೆದು ಈಗ ಟ್ರಾಫಿಕ್‌ ಸಿಗ್ನಲ್‌ ಅಳವಡಿಕೆ ಮಾಡಲಾಗಿದೆ. ವಿಶ್ವವಿದ್ಯಾನಿಲಯಗಳು, ಮೆಡಿಕಲ್‌ ಕಾಲೇಜುಗಳು, ಆಸ್ಪತ್ರೆಗಳಿಗೆ ಹೆಚ್ಚಿನ ಮಂದಿ ಈ ಭಾಗದಲ್ಲಿ ಓಡಾಟ ನಡೆಸುವ ಕಾರಣ ಟ್ರಾಫಿಕ್‌ ನಿರ್ವಹಣೆಯೂ ಅತ್ಯಗತ್ಯವಾಗಿದೆ.

ಮಣಿಪಾಲದಿಂದ ಪರ್ಕಳ ಭಾಗಕ್ಕೆ ಹಾಗೂ ಆ ಭಾಗದಿಂದ ಮಣಿಪಾಲಕ್ಕೆ ಬರುವವರು ಟ್ರಾಫಿಕ್‌ ದಟ್ಟಣೆಯಲ್ಲಿ ನಿಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗೆಯೇ ಪರ್ಕಳ ಭಾಗದಿಂದ ಉಡುಪಿ, ಮಣಿಪಾಲದ ಕೈಗಾರಿಕಾ ವಲಯಕ್ಕೆ ಹೋಗುವವರಿಗೂ ಟ್ರಾಫಿಕ್‌ ಬಿಸಿ ತಪ್ಪಿದ್ದಲ್ಲ.

90 ಸೆಕೆಂಡು ಸಮಯ

ಟ್ರಾಫಿಕ್‌ ದಟ್ಟಣೆಯಲ್ಲಿ ಸವಾರರು ಸುಮಾರು 90 ಸೆಕೆಂಡ್‌ಗಳಷ್ಟು ಸಮಯಾವಕಾಶವನ್ನು ವ್ಯಯ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳುವ ತುರ್ತು ವಾಹನಗಳೂ ಇದರ ನಡುವೆಯೇ ಬಾಕಿ ಉಳಿದ ಹಲವಾರು ಉದಾಹರಣೆಗಳಿವೆ. ಪರ್ಕಳ ಭಾಗದಿಂದ ಆಗಮಿಸಿ ಮಣಿಪಾಲ ಗ್ರೀನ್ಸ್‌ಗೆ ತೆರಳುವವರು ಮಣಿಪಾಲ ಪೊಲೀಸ್‌ ಠಾಣೆವರೆಗೆ ಹೋಗಿ ಅನಂತರ ಯು ಟರ್ನ್ ಹೊಡೆದು ತೆರಳಬೇಕಿದೆ. ಅದೇ ರೀತಿ ಕೆನರಾ (ಸಿಂಡಿಕೇಟ್‌) ಬ್ಯಾಂಕ್‌ ಬಳಿಯಿಂದ ಪರ್ಕಳ ಭಾಗಕ್ಕೆ ತೆರಳುವವರಿಗೆ ಯಾವುದೇ ಸಿಗ್ನಲ್‌ ವ್ಯವಸ್ಥೆ ಇಲ್ಲ. ಪೊಲೀಸರು ಹೇಳುವವರೆಗೆ ವಿನಾ ಕಾರಣ ಕಾಯುವ ಅನಿವಾರ್ಯತೆ ಎದುರಾಗಿದೆ. ಸಮಯ ಮಿತಿಯನ್ನು ಕಡಿತಗೊಳಿಸ ಬೇಕು ಎನ್ನುವ ಆಗ್ರಹಗಳೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಸಿಬ್ಬಂದಿ ಅತ್ಯವಶ್ಯಕ

ಗೊಂದಲದ ಗೂಡಾದ ಮಣಿಪಾಲ ಟ್ರಾಫಿಕ್‌ ಸಿಗ್ನಲ್‌ ಬಳಿ ಸಂಚಾರ ನಿಯಮಾವಳಿ ಪಾಲನೆ ಮಾಡಲು ಮಣಿಪಾಲ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೂ ಅವೈಜ್ಞಾನಿಕವಾಗಿರುವ ಈ ಸರ್ಕಲ್‌ನಲ್ಲಿ ವಾಹನಗಳನ್ನು ಸುಲಭದಲ್ಲಿ ನಿಯಂತ್ರಿಸುವುದು ಅಸಾಧ್ಯವಾಗಿದೆ. ಇಲ್ಲಿ ಹೆಚ್ಚುವರಿ ಪೊಲೀಸರ ಅಗತ್ಯವೂ ಕಂಡುಬರುತ್ತಿದೆ. ಕೆಲವೆಡೆ ಸಿಗ್ನಲ್‌ ಗೊಂದಲ ತೊಡಕುಗಳಿದ್ದು, ಅದರ ನಿವಾರಣೆಗೂ ಆಡಳಿತ ವ್ಯವಸ್ಥೆ ಆದ್ಯತೆ ನೀಡುವ ಅಗತ್ಯವಿದೆ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.