ಚಾಪೆ ನಾಟಿ, ನೇರ ಬಿತ್ತನೆಗೆ ಭತ್ತ ಕೃಷಿಕರ ಒಲವು
ಮಳೆ ವಿಳಂಬ, ಮುಂಗಾರು ದುರ್ಬಲ ಕಾರಣ
Team Udayavani, Jun 26, 2023, 3:23 PM IST
ಕಾರ್ಕಳ: ಜೂನ್ ತಿಂಗಳ ಮೊದಲ ದಿನಗಳಲ್ಲಿ ಪ್ರವೇಶಿಸಬೇಕಿದ್ದ ಮುಂಗಾರು ತಡವಾಗಿ ಆಗಮಿಸಿದೆ. ಈ ಕಾರಣಕ್ಕಾಗಿ ಭತ್ತದ ಕೃಷಿ ಚಟುವಟಿಕೆ ವಿಳಂಬವಾಗಿದ್ದು ರೈತರು ಸಾಂಪ್ರದಾಯಿಕ ನಾಟಿ ಬದಲು ಚಾಪೆ ನಾಟಿ, ನೇರ ಬಿತ್ತನೆಗೆ ಒಲವು ತೋರುತ್ತಿದ್ದಾರೆ.
ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಮುಂಗಾರು ಕಳೆದೆರಡು ದಿನಗಳಿಂದ ಕೊಂಚ ಬಿರುಸು ಪಡೆದುಕೊಂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕಾರ್ಕಳ ತಾಲೂಕಿನಲ್ಲಿ 5,750 ಹೆಕ್ಟೇರ್, ಹೆಬ್ರಿ ತಾಲೂಕಿನಲ್ಲಿ 1,600 ಹೆಕ್ಟೇರ್ನಲ್ಲಿ ಭತ್ತ ಬಿತ್ತನೆ ಮಾಡಲು ಉದ್ದೇಶಿಸಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮುಂಗಾರು ಪೂರ್ವ ಮಳೆ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಅರಂಭವಾಗು ತ್ತಿತ್ತು. ಈ ಬಾರಿ ಮುಂಗಾರು ಪೂರ್ವ ಮಳೆಯೇ ಸುರಿದಿಲ್ಲ. ಚಂಡಮಾರುತ ಪರಿಣಾಮದಿಂದ ಮುಂಗಾರು ದುರ್ಬಲವಾಗಿತ್ತು. ಜೂನ್ ಮೊದಲ ವಾರ ಪ್ರವೇಶಿಸಬೇಕಾಗಿದ್ದ ಮುಂಗಾರು ಮೂರು ವಾರ ತಡವಾಗಿ ಅಗಮಿಸಿದ್ದ ಕಾರಣ ಕೃಷಿ ಚಟುವಟಿಕೆಗಳು ಎರಡು ತಿಂಗಳು ತಡವಾಗಿ ಆರಂಭಗೊಂಡಿವೆ.
70 ಶೇ. ದಷ್ಟು ಮಳೆ ಕೊರತೆ ಈ ಬಾರಿ ಎದುರಾಗಿದೆ. ಗದ್ದೆಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಮನೆಯಲ್ಲಿಯೇ ನೇಜಿ ಹಾಕಲು ಬಾವಿ, ಬೋರ್ವೆಲ್ ನೀರನ್ನು ಆಶ್ರಯಿಸಿ ನೇಜಿ ಹಾಕಲಾಗಿತ್ತು. ಕೆಲವೆಡೆ ರೈತರು ಗದ್ದೆಗಳಿಗೆ ಬೋರ್ವೆಲ್ ನೀರನ್ನು ಹಾಯಿಸಿದ್ದಾರೆ, ಈಗ ಮುಂಗಾರು ಮಳೆ ಅಗಮನದ ಬಳಿಕ ರೈತರಲ್ಲಿ ನಿಟ್ಟುಸಿರು ಬಿಟ್ಟಿದ್ದು ಕಾರ್ಕಳ ತಾಲೂಕಿನ ಎಣ್ಣೆಹೊಳೆ ಪಿಜತ್ತಿಮಾರು, ಅಜೆಕಾರು, ಕೆರುವಾಶೆ, ಮಾಳ, ಬೋಳ,ಬೆಳ್ಮಣ್, ಹೆಬ್ರಿ
ತಾಲೂಕಿನ ಶಿವಪುರ, ಅಂಡಾರು, ಮುನಿಯಾಲು ಬೈಲು, ಚಾರ, ಸಾಣೂರು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ನಾಟಿ ಕಾರ್ಯ ಆರಂಭವಾಗಿದೆ. ಕೆಲವು ಬೆಟ್ಟು ಗದ್ದೆಗಳ ಪೈಕಿ ಮಳೆ ತಡವಾಗಿ ಆರಂಭವಾದ ಕಾರಣ ಹೊಲ ಹದಗೊಳಿಸುವ ಕೆಲಸ, ಗದ್ದೆ ಉಳುಮೆ ಕಾರ್ಯಗಳು ಆರಂಭವಾಗಿವೆ. ಹೆಬ್ರಿ ನಾಡಾ³ಲು, ಕಾರ್ಕಳ ತಾಲೂಕಿನ ಬೈಲೂರು, ನೀರೆ,ಸೇರಿದಂತೆ ಹರಿಖಂಡಿಗೆ, ದೊಂಡೇರಂಗಡಿಯ ಕೆಲವು ಭಾಗಗಳಲ್ಲಿ ಉಳುಮೆಯನ್ನು ರೈತರು ಆರಂಭಿಸಿದ್ದು ನೇರ ಬಿತ್ತನೆಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದಾರೆ.
ಸಾಂಪ್ರದಾಯಿಕ ಬೇಸಾಯಕ್ಕೆ ಅಡ್ಡಿ
ಮುಂಗಾರು ಮಳೆ ಈ ಬಾರಿ ಸಾಕಷ್ಟು ವಿಳಂಬವಾಗಿದೆ. ಸಾಂಪ್ರದಾಯಿಕ ಬೇಸಾಯಕ್ಕೆ ಅಡ್ಡಿಯಾಗಿದೆ. ಮುಂಗಾರು
ಈಗ ಪ್ರಾರಂಭಗೊಂಡಿದೆ. ಅನಿಶ್ಚಿತತೆಯೂ ಇದೆ. ಮಳೆಯ ಸರಾಸರಿ ನೋಡಿಕೊಂಡು ಕೃಷಿ ಚಟುವಟಿಕೆ ಆರಂಭಿಸಬೇಕಿದೆ.
-ಚಂದ್ರಯ್ಯ ಬಜಗೋಳಿ , ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?